More

    ತಲ್ವಾರ್ ತೋರಿಸಿ ಪೇದೆಗೆ ಅಟ್ಟಾಡಿಸಿ ಓಡಿಸಿದ ವ್ಯಕ್ತಿ

    ಬೀದರ್: ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ಪೇದೆಯೊಬ್ಬರಿಗೆ ವ್ಯಕ್ತಿಯೊಬ್ಬ ತಲ್ವಾರ್ ತೋರಿಸಿ ಅಟ್ಟಾಡಿಸಿ ಓಡಿಸಿದ ಘಟನೆ ಇಲ್ಲಿನ ಓಲ್ಡ​ ಸಿಟಿಯಲ್ಲಿ ಶನಿವಾರ ಬೆಳಗ್ಗಿನ ಜಾವ ನಡೆದಿದೆ. ಇಲ್ಲಿನ ಸಿಂಗಾರಬಾಗ್ ನಿವಾಸಿ ಮಹ್ಮದ್ ಮುಕ್ತಾರ್(45) ಎಂಬಾತ ತಲ್ವಾರ್ ಕೈಯಲ್ಲಿ ಹಿಡಿದುಕೊಂಡು ಸುತ್ತಾಡಿ ಪೇದೆ ಸೇರಿ ಸ್ಥಳೀಯರಲ್ಲೂ ಕೆಲಕಾಲ ಆತಂಕ ಮೂಡಿಸಿದ್ದ. ಕೊನೆಗೆ ಸ್ಥಳೀಯರೇ ಈತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈತನು ಮಾನಸಿಕ ಅಸಮತೋಲನ ಕಳೆದುಕೊಂಡವ ಎನ್ನಲಾಗಿದೆ.
    ರಾತ್ರಿ ಮನೆಯಿಂದ ಹೊರಗಡೆ ಬಂದಿದ್ದ ಈತನಿಗೆ ಗಸ್ತಿನಲ್ಲಿದ್ದ ಪೇದೆ ಪ್ರಶ್ನಿಸಲು ಮುಂದಾಗಿದ್ದಾರೆ. ಇದಿಷ್ಟಕ್ಕೆ ಆತ ಸಿಡಿಮಿಡಿಗೊಂಡು ತನ್ನ ಬೈಕ್ನಲ್ಲಿದ್ದ ತಲ್ವಾರ್ ತೆಗೆದು ಪೇದೆ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಬೆದರಿದ ಪೇದೆ ಓಡುತ್ತ ಎಸ್ಪಿ ಕಚೇರಿಗೆ ಹೋಗಿದ್ದಾರೆ. ಅಲ್ಲಿವರೆಗೆ ಈತ ಬೆನ್ನಟ್ಟಿ ಹೋಗಿದ್ದಾನೆ. ಪೇದೆ ಎಸ್ಪಿ ಕಚೇರಿಯಲ್ಲಿ ಬಚ್ಚಿಕೊಂಡ ನಂತರ ವಾಪಸ್ಸಾಗಿದ್ದಾನೆ ಎಂದು ಹೇಳಲಾಗಿದೆ.
    ಅಲ್ಲಿಂದ ಬರುವಾಗ ಈತ ಕೆಲವು ಬೈಕ್, ಕಾರುಗಳಿಗೆ ತಲ್ವಾರ್ನಿಂದ ಹೊಡೆದಿದ್ದಾನೆ. ಗದ್ದಲ ನೋಡಿ ಹೊರಬಂದ ಅನೇಕರು ಈತನ ಅಟ್ಟಹಾಸ ನೋಡಿ ಹೌಹಾರಿದ್ದಾರೆ. ಪೇದೆಗೆ ಅಟ್ಟಾಡಿಸುತ್ತಿರುವುದನ್ನು ನೋಡಿ ಸ್ಥಳೀಯರು ಪೊಲೀಸರಿಗೆ ಫೋನ್ ಮಾಡಿದರೂ ರಿಸೀವ್ ಮಾಡಿಲ್ಲ. ಹೀಗಾಗಿ ಕೆಲವರು ನೇರ ನಗರ ಠಾಣೆಗೆ ತೆರಳಿ ಮಾಹಿತಿ ನೀಡಿದರು. ಪೊಲೀಸರು ಒಂದೂವರೆ ಗಂಟೆ ನಂತರ ಸ್ಥಳಕ್ಕೆ ಬಂದರು. ಅಷ್ಟೊತ್ತಿಗೆ ಸ್ಥಳೀಯರೇ ಈತನಿಗೆ ಹಿಡಿದು ತಲ್ವಾರ್ ಕಸಿದುಕೊಂಡು ಕೂಡಿಸಿದ್ದರು.
    ಮುಕ್ತಾರ್ ಕೆಲವು ತಿಂಗಳಿಂದ ಮಾನಸಿಕ ಅಸಮತೋಲನ ಕಳೆದುಕೊಂಡು ಓಡಾಡುತ್ತಿದ್ದಾನೆ ಎನ್ನಲಾಗಿದೆ. ಮುಂಚೆ ಬೇರೆ ಕಡೆ ಮನೆ ಇತ್ತು. ಮನೆಯವರು ಈತನ ಕಿರಿಕಿರಿಯಿಂದ ದೂರ ಉಳಿದಿದ್ದಾರೆ. ಹೀಗಾಗಿ ಸಿಂಗಾರ್ ಬಾಗ್ನಲ್ಲಿ ಎರಡು ವಾರಗಳಿಂದ ಈತನೊಬ್ಬನೇ ಉಳಿದಿದ್ದಾನೆ ಎನ್ನಲಾಗಿದೆ. ಈತನಿಗೆ ಬ್ರಿಮ್ಸ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts