More

    ಡಿಗ್ಗಿ ದಂಪತಿಗೆ “ದಾಸೋಹ ಜ್ಞಾನ ರತ್ನ” ಪ್ರಶಸ್ತಿ

    ಕಲಬುರಗಿ: ಶರಣಬಸವೇಶ್ವರ ಸಂಸ್ಥಾನದ ೮ನೇ ಮಹಾದಾಸೋಹ ಪೀಠಾಧಿಪತಿ ಪೂಜ್ಯ ಡಾ.ಶರಣಬಸವಪ್ಪ ಅಪ್ಪಾಜಿ ಹಾಗೂ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್​ ಪರ್ಸನ್ ಡಾ.ದಾಕ್ಷಾಯಿಣಿ ಅವ್ವಾಜಿ ಅವರ ಸಾನ್ನಿಧ್ಯದಲ್ಲಿ ನಗರದ ಮಹಾಮನೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜಗನ್ನಾಥ ಡಿಗ್ಗಿ ದಂಪತಿಗೆ ಪ್ರತಿಷ್ಠಿತ “ದಾಸೋಹ ಜ್ಞಾನ ರತ್ನ” ಪ್ರಶಸ್ತಿ ಪ್ರದಾನ ಮಾಡಿದರು.

    ೫೦,೦೦೦ ನಗದು, ಪ್ರಶಸ್ತಿ ಪತ್ರ, ಶಾಲು ಮತ್ತು ಫಲಪುಷ್ಪವನ್ನೊಳಗೊಂಡ ಪ್ರಶಸ್ತಿಯನ್ನು ಶರಣಬಸವೇಶ್ವರರ ಕಟ್ಟಾ ಭಕ್ತರು ಹಾಗೂ ಪ್ರಸಿದ್ಧ ವ್ಯಾಪಾರಿ ಮತ್ತು ಪರೋಪಕಾರಿ ಕುಟುಂಬದಿಂದ ಬಂದ ಡಿಗ್ಗಿ ದಂಪತಿಗಳಿಗೆ ಪ್ರದಾನ ಮಾಡಲಾಯಿತು. ಡಾ.ಅಪ್ಪಾಜಿ ಮತ್ತು ಡಾ.ದಾಕ್ಷಾಯಿಣಿ ಅವ್ವಾಜಿಯವರು ಶರಣಬಸವೇಶ್ವರ ದೇವರ ಮೇಲಿನ ಅಚಲ ಭಕ್ತಿಗಾಗಿ ಡಿಗ್ಗಿ ದಂಪತಿಗಳನ್ನು ಶ್ಲಾಘಿಸಿದರು.

    ಇದಕ್ಕೂ ಮುನ್ನ ಜಿಲ್ಲೆಯ ಮುಗಳನಾಗವಿಯ ಕಟ್ಟಿಮನಿ ಸಂಸ್ಥಾನ ಹಿರೇಮಠದ ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯರು, ಶ್ರೀ ಸಿದ್ದಲಿಂಗ ಶಿವಾಚಾರ್ಯರು ವಿಶೇಷ ಉಪನ್ಯಾಸ ನೀಡಿದರು.

    ಶರಣಬಸವೇಶ್ವರ ಕಲಾ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸುರೇಶ್ ನಂದಗಾಂವ್​ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts