More

    ಟೆನಿಕಾಯ್ಟ್- ಕರಾಟೆ ಸ್ಪರ್ಧೆಯಲ್ಲಿ ಎಂ.ಬಿ.ಕಾಲೇಜು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

    ದಾವಣಗೆರೆ: ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಹಮ್ಮಿಕೊಂಡಿದ್ದ 2023-24ನೇ ಶೈಕ್ಷಣಿಕ ವರ್ಷದ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಮಾಗನೂರು ಬಸಪ್ಪ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ವಿವಿಧ ಕ್ರೀಡೆಗಳಲ್ಲಿ ವಿಜೇತರಾಗಿ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

    ಟೆನಿಕಾಯ್ಟ ಸ್ಫರ್ಧೆಯಲ್ಲಿ ಸಾಯಿರಾಜ್, ಉಮೇಶ್ ಎರಕಲ್, ಫರ‌್ಹಾನ್ ಖಾನ್, ಆರ್.ಎನ್. ವಿಕಾಸ್, ಆರ್.ಆರ್. ಮನ್ವಿತ್, ಶ್ರೇಯಸ್ ಎಚ್. ಯರೇಶೀಮಿ ಇವರ ತಂಡ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
    ಕರಾಟೆಯಲ್ಲಿ 45 ಕೆ.ಜಿ ವಿಭಾಗದಲ್ಲಿ ಪಿ. ಶ್ರೇಯಾ, 50 ಕೆ.ಜಿ ವಿಭಾಗದಲ್ಲಿ ಅಭಿಲಾಷ ಕೆ ನಾಯಕ್, 70 ಕೆ.ಜಿ ವಿಭಾಗದಲ್ಲಿ ಜಿ.ಜೆ. ಕವನ ಮತ್ತು 58 ಕೆ.ಜಿ ವಿಭಾಗದಲ್ಲಿ ಎಂ.ಯು. ಸೋಮಶೇಖರ್ ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ.
    ತಾಲೂಕು ಮಟ್ಟದ ಬಾಲಕಿಯರ ವಿಭಾಗದ 100 ಮೀ. ಓಟದ ಸ್ಪರ್ಧೆಯಲ್ಲಿ ಎಂ.ಆರ್. ವಿದ್ಯಾ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಗುಂಡು ಎಸೆತ ಸ್ಪರ್ಧೆಯಲ್ಲಿ ಜಿ.ಜೆ. ಕವನಾ ತೃತೀಯ ಸ್ಥಾನ ಪಡೆದಿದ್ದಾರೆ ಎಂದು ಪ್ರಾಚಾರ್ಯ ಡಾ.ಎಸ್.ಪ್ರಸಾದ್ ಬಂಗೇರಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts