More

    ಜೆಡಿಎಸ್ ಬದುಕಿದೆ ಅಂತ ತೋರಿಸಿದ್ದೀರಿ

    ಕೆ.ಆರ್.ಪೇಟೆ: ಇಂದು ಕೆ.ಆರ್.ಪೇಟೆಯಲ್ಲಿ ಜೆಡಿಎಸ್ ಇನ್ನೂ ಬದುಕಿದೆ ಅಂತ ತೋರಿಸಿದ್ದೀರ. ಕೆ.ಆರ್.ಪೇಟೆಗೂ ದೇವೇಗೌಡರ ಕುಟುಂಬಕ್ಕೂ ಇರುವ ಭಾವನಾತ್ಮಕ ಸಂಬಂಧ ಮರೆಯಲಾಗದ್ದು. ಇಷ್ಟೊಂದು ಸಂಖ್ಯೆಯಲ್ಲಿ ಸೇರುವ ಮೂಲಕ ಯಾರು ಟೋಪಿ ಹಾಕಿದ್ದಾರೆ, ಬೆನ್ನಿಗೆ ಚೂರಿಗೆ ಹಾಕಿದ್ದಾರೆ ಅವರನ್ನು ಕೆ.ಆರ್.ಪೇಟೆಯಿಂದ ಹೊರಹಾಕುವ ಸಂದೇಶ ನೀಡಿದ್ದೀರಿ ಎನ್ನುವ ಮೂಲಕ ಸಚಿವ ನಾರಾಯಣಗೌಡರನ್ನು ರಾಜಕೀಯದಿಂದ ಹೊರಕಳಿಸಿ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕರೆ ನೀಡಿದರು.


    ಪಟ್ಟಣದ ಖಾಸಿಂಖಾನ್ ಸಮುದಾಯ ಭವನ ಸಮೀಪದ ಆವರಣದಲ್ಲಿ ಪಂಚರತ್ನ ರಥಯಾತ್ರೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕರ್ತರ ಬಹಿರಂಗ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಕೆ.ಆರ್.ಪೇಟೆ ಜೆಡಿಎಸ್ ಅಭ್ಯರ್ಥಿ ಮಂಜು ಅಲ್ಲ, ನಿಮ್ಮ ಮನೆ ಮಗ ಕುಮಾರಣ್ಣ. ಅಭ್ಯರ್ಥಿಯಾಗಿ ಎಚ್.ಟಿ.ಮಂಜು ಘೋಷಣೆ ಮಾಡಿದ್ದೇನೆ. ಕುಮಾರಣ್ಣಗೆ ವೋಟು ಕೊಡ್ತಿದ್ದೇವೆ ಅಂತ ಮತ ಕೊಡಿ. ಪ್ರಾಮಾಣಿಕವಾಗಿ ಕೆಲಸ ಮಾಡ್ತಾರೆ ಎಂದು ಹೇಳಿದರು.


    ಪಟ್ಟಣದಲ್ಲಿ ಪಂಚರತ್ನ ಯಾತ್ರೆಯ ಬಹಿರಂಗ ಸಭೆ ಮುಗಿದ ನಂತರಎಚ್‌ಡಿ ಕುಮಾರಸ್ವಾಮಿ ಕ್ರಿಸ್‌ಮಸ್ ಹಬ್ಬದ ಹಿನ್ನಲೆ ಚರ್ಚ್‌ಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಜತೆಯಲ್ಲಿ ನಿಖಿಲ್‌ಕುಮಾರಸ್ವಾಮಿ, ಶಾಸಕ ಪುಟ್ಟರಾಜು, ಅಭ್ಯರ್ಥಿ ಎಚ್.ಟಿ.ಮಂಜು ಜತೆಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts