More

    ಚೌಡಯ್ಯ-ವೇಮನರ ಚಿಂತನೆಗಳು ಸಮಾಜಕ್ಕೆ ಮಾದರಿ- ಜಿಲ್ಲಾಧಿಕಾರಿ ಶಿವಾನಂದ ಕಾಪಶಿ

    ದಾವಣಗೆರೆ: ನೇರ ನಿಷ್ಠೂರವಾದಿಗಳೂ, ಸಮ ಸಮಾಜದ ನಿರ್ಮಾಣದ ಪ್ರತಿಪಾದಕರಾದ ನಿಜಶರಣ ಅಂಬಿಗರ ಚೌಡಯ್ಯ ಹಾಗೂ ಮಹಾಯೋಗಿ ವೇಮನರ ಆದರ್ಶಗಳು ಇಂದಿನ ಸಮಾಜಕ್ಕೆ ಮಾದರಿಯಾಗಿವೆ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಹೇಳಿದರು.
    ಜಿಲ್ಲಾಧಿಕಾರಿ ಕಚೇರಿ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಪಾಲಿಕೆ ಸಹಯೋಗದಲ್ಲಿ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಶ್ರೀ ಮಹಾಯೋಗಿ ವೇಮನ ಹಾಗೂ ನಿಜಶರಣ ಅಂಬಿಗರ ಚೌಡಯ್ಯ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು.
    ಅಂಬಿಗರ ಚೌಡಯ್ಯನವರು 12ನೇ ಶತಮಾನದಲ್ಲಿಯೇ ಜಾತೀಯತೆ ಮೌಢ್ಯತೆಯನ್ನು ಖಂಡಿಸಿ ತಮ್ಮ ಹೆಸರನ್ನೇ ಅಂಕಿತವನ್ನಾಗಿಟ್ಟುಕೊಂಡಿರುವ ವಿಭಿನ್ನ ವ್ಯಕ್ತಿತ್ವದ ಶ್ರೇಷ್ಠ ವಚನಾಕಾರ. ಇವರ ವಚನ ತತ್ವ್ವಾದರ್ಶಗಳು ಇಂದಿನ ಸಮಾಜಕ್ಕೆ ಅಗತ್ಯವಿವೆ ಎಂದರು.
    ಅಂಬಿಗರ ಚೌಡಯ್ಯನವರು ಅಲ್ಲಮ-ಬಸವಣ್ಣರ ಕಾಲದ ಸಮಾಜದ ಲೋಪಗಳನ್ನು ದಿಟ್ಟತನದಿಂದ ತಿದ್ದುವಲ್ಲಿ ಸಫಲರಾಗಿದ್ದಾರೆ ಇವರ ವಚನ ಸಂಸ್ಕೃತಿಯನ್ನು ಉಳಿಸಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ ಎಂದರು.
    ಮಹಾಯೋಗಿ ವೇಮನರು 15ನೇ ಶತಮಾನ ಕಂಡ ಅದ್ಭುತ ಶಾಸ್ತ್ರಜ್ಞರಾಗಿದ್ದವರು. ಡಾಂಬಿಕತನ, ಸಮಾಜದಲ್ಲಿನ ಜಾತೀಯತೆ, ಅಸಮಾನತೆ ಖಂಡಿಸಿದ ಮಹಾಯೋಗಿ. ಇವರು ರಚಿಸಿದ 15000 ವಚನಗಳ ಪೈಕಿ ನಶಿಸಿ ಕೆಲ ವಚನಗಳು ಮಾತ್ರ ಉಳಿದಿವೆ ಎಂದು ಹೇಳಿದರು.
    ಅಂಬಿಗರ ಚೌಡಯ್ಯ,ಮಹಾಯೋಗಿ ವೇಮನರ ಸಾಹಿತ್ಯ ಹಾಗೂ ಅವರ ಆದರ್ಶಗಳು ಎಂದಿಗೂ ಈ ಸಮಾಜಕ್ಕೆ ಅಗತ್ಯವಾಗಿದೆ. ಇವುಗಳನ್ನು ಉಳಿಸಿ, ಪಾಲಿಸುವ ಅಗತ್ಯವಿದೆ ಎಂದು ಹೇಳಿದರು. ಮೇಯರ್ ಜಯಮ್ಮ ಗೋಪಿನಾಯ್ಕ್, ಜಿಲ್ಲಾ ಬೆಸ್ತ ಸಮಾಜದ ಕಾರ್ಯದರ್ಶಿ ಜೆ.ಉಮೇಶ್, ವೇಮನ ಸಮಾಜದ ಜಿಲ್ಲಾಧ್ಯಕ್ಷ ವೆಂಕಟರಮಣ ರೆಡ್ಡಿ, ಕಸಾಪ ತಾಲೂಕು ಅಧ್ಯಕ್ಷೆ ಸುಮತಿ ಜಯಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts