More

    ಗೋವಿಂದ ಕಾರಜೋಳಗೆ ತರಾಟೆ ದೂರು ದಾಖಲು

    ಚಿತ್ರದುರ್ಗ: ಮಾಜಿ ಡಿಸಿಎಂ ಗೋವಿಂದ ಕಾರಜೋಳ ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸುವ ಸಂದರ್ಭ ಮಾದಿಗ ಮಹಾಸಭಾದ ಮುಖಂಡರಾದ ಹನುಮಂತಪ್ಪ ದುರ್ಗ, ಮಹಾಲಿಂಗಪ್ಪ, ಸೋಮಪ್ಪ, ರಂಗಪ್ಪ ಸೇರಿ ಅನೇಕರು ಒಳಗೆ ಪ್ರವೇಶಿಸಿ, ನಿಮ್ಮ ಅವಧಿಯಲ್ಲೇ ಮಾದಿಗ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಅವರನ್ನು ತರಾಟೆಗೆ ತೆಗೆದುಕೊಂಡರು.

    ಈ ವೇಳೆ ಮಾತಿನ ಚಕಮಕಿ ನಡೆಯಿತು. ಇಂಥ ಗೂಂಡಾ ಸಂಸ್ಕೃತಿ 40 ವರ್ಷದ ರಾಜಕೀಯ ಇತಿಹಾಸದಲ್ಲಿ ಕಂಡಿಲ್ಲ. ಏನೇ ಇದ್ದರೂ ಹೊರಗೆ ಪ್ರಶ್ನಿಸಬೇಕು. ಅದನ್ನು ಬಿಟ್ಟು ಏಕಾಏಕಿ ನುಗ್ಗಿ ಗಲಾಟೆಗೆ ಮುಂದಾಗುವುದು ಎಷ್ಟು ಸರಿ. ಇದಕ್ಕೆ ಕಾಂಗ್ರೆಸ್ ಸರ್ಕಾರವೇ ಹೊಣೆ. ಕೂಡಲೇ ಬಂಧಿಸಬೇಕು ಎಂದು ಐಜಿಪಿ ಅವರಿಗೆ ದೂರವಾಣಿ ಕರೆ ಮಾಡಿ ಒತ್ತಾಯಿಸಿದರು.

    ಸುದ್ದಿಗೋಷ್ಠಿ ನಡೆಸುವ ವೇಳೆ ಅಡ್ಡಿಪಡಿಸಿ, ಗಲಾಟೆ ನಡೆಸಿದ ಸಂಬಂಧ ಹನುಮಂತಪ್ಪ ದುರ್ಗ, ದೇವರಾಜು, ಗಂಗಾಧರ, ಸತೀಶ್‌, ಮುನಿಯಪ್ಪ ಸೇರಿ 10 ಜನರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮಾಜಿ ಡಿಸಿಎಂ ಅಂಗ ರಕ್ಷಕ ಶ್ರೀಶೈಲ ಅವರು ಚಿತ್ರದುರ್ಗದ ನಗರ ಪೊಲೀಸ್‌ ಠಾಣೆಗೆ ಘಟನೆ ಕುರಿತು ಸೋಮವಾರ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts