More

    ಗೋವು ದಾನ ಮಾಡಿದ ಶಾಸಕ ದೇಸಾಯಿ

    ಉಪ್ಪಿನಬೆಟಗೇರಿ: ಗ್ರಾಮದ ವಿರಕ್ತಮಠದ ಶ್ರೀ ಕುಮಾರ ವಿರೂಪಾಕ್ಷ ಸ್ವಾಮೀಜಿ ನಡೆಸುತ್ತಿರುವ ಗೋಶಾಲೆಗೆ ಶಾಸಕ ಅಮೃತ ದೇಸಾಯಿ ಅವರು ಗಿರ್ ಹಾಗೂ ಮಲೆನಾಡ ತಳಿಯ ಎರಡು ಗೋವುಗಳನ್ನು ಮಂಗಳವಾರ ದಾನವಾಗಿ ನೀಡಿದರು.

    ಆಕಳುಗಳನ್ನು ಸ್ವೀಕರಿಸಿ ಮಾತನಾಡಿದ ಶ್ರೀಗಳು, ಮಠದ ಜಮೀನಿನಲ್ಲಿ ಗೋಶಾಲೆ ಆರಂಭಿಸಿದ್ದು, ಧಾರವಾಡ ಉದ್ಯಮಿ ಸೀತಾರಾಮ ಶೆಟ್ಟಿ ಅವರು ಗಿರ್, ಮಲೆನಾಡ, ಮುರಗಿ, ಖಿಲಾರಿ ತಳಿಗಳ ಐದು ಆಕಳು ಹಾಗೂ ಬಿ.ಶಿವಪ್ಪ ಅವರು ಮಲೆನಾಡ ಗಿಡ್ಡ ತಳಿಯ ಒಂದು ಗೋವನ್ನು ದಾನವಾಗಿ ನೀಡಿದ್ದಾರೆ ಎಂದರು. ಮಠದಲ್ಲಿ 15 ತಳಿಯ ಗೋವುಗಳನ್ನು ಜೋಪಾನ ಮಾಡಲಾಗುತ್ತಿದ್ದು, ಇನ್ನೂ ಹಲವರು ಗೋವುಗಳನ್ನು ದಾನವಾಗಿ ನೀಡುವ ಕುರಿತು ವಾಗ್ದಾನ ಮಾಡಿದ್ದಾರೆ ಎಂದರು.

    ಶ್ರೀಮಠದ ವತಿಯಿಂದ ಅಮೃತ ದೇಸಾಯಿ ಹಾಗೂ ಪ್ರಿಯಾ ದೇಸಾಯಿ ದಂಪತಿಯನ್ನು ಸನ್ಮಾನಿಸಲಾಯಿತು. ಜಿಪಂ ಮಾಜಿ ಸದಸ್ಯ ತವನಪ್ಪ ಅಷ್ಟಗಿ, ಕೆಎಂಎಫ್ ನಿರ್ದೇಶಕ ಶಂಕರ ಮುಗದ, ಸಂತೋಷಗೌಡ ಪಾಟೀಲ, ಗ್ರಾಪಂ ಮಾಜಿ ಅಧ್ಯಕ್ಷ ಮಹಾವೀರ ಅಷ್ಟಗಿ, ರೇವಣಸಿದ್ಧಪ್ಪ ನವಲಗುಂದ, ನಿಂಗರಾಜ ಹಡಪದ, ಕಸ್ತೂರಿ ಯಲಿಗಾರ, ದ್ರಾಕ್ಷಾಯಿಣಿ ತೊಗ್ಗಿ, ಸುರೇಶಬಾಬು ತಳವಾರ, ಶಿವಪ್ಪ ವಿಜಾಪೂರ, ಈರಣ್ಣ ತೊಗ್ಗಿ, ಕೃಷ್ಣಾ ಬುದ್ನಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts