More

    ಗುರುಲಿಂಗಯ್ಯ ಸ್ವಾಮಿ ಮೃದು ಸ್ವಭಾವದ ವ್ಯಕ್ತಿ

    ಯಾದಗಿರಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಧ್ಯಮ ಸಂಯೋಜಕ ಗುರುಲಿಂಗಯ್ಯ ಸ್ವಾಮಿ ಹೊಳಿಮಠ ನಿಧನದ ಹಿನ್ನೆಲೆಯಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

    ಸಂಘದ ಉಪಾಧ್ಯಕ್ಷ ರಾಜು ನಳ್ಳಿಕರ ಮಾತನಾಡಿ, ಹೊಳಿಮಠ ಅವರು ಅತ್ಯಂತ ಮೃದು ಸ್ವಭಾವದ ವ್ಯಕ್ತಿಯಾಗಿದ್ದರು. ವೃತ್ತಿಯಲ್ಲಿ ಸಾಕಷ್ಟು ಅನುಭವ ಹೊಂದಿದ್ದ ಅವರು, ರಾಜ್ಯಾದ್ಯಂತ ಕಿರಿಯ ಪತ್ರಕರ್ತರನ್ನು ಬೆಳೆಸಿದ್ದಾರೆ. ಅಲ್ಲದೆ ನೊಂದವರ ನೋವಿಗೆ ಆಸರೆಯಾಗುವ ಗುಣ ಹೊಂದಿದ್ದರು. ಸ್ವಾಮಿಗಳ ನಿಧನದಿಂದ ಮಾಧ್ಯಮ ಕ್ಷೇತ್ರಕ್ಕೆ ತುಂಬಲಾಗದ ನಷ್ಟವಾಗಿದೆ ಎಂದು ಕಂಬನಿ ಮಿಡಿದರು.

    ಸಂಘದ ಪ್ರಧಾನ ಕಾರ್ಯದಶರ್ಿ ದಿನೇಶ, ಕಾರ್ಯದಶರ್ಿ ಸಾಜಿದ್ ಹಯ್ಯಾತ್, ಕುಮಾರಸ್ವಾಮಿ ಕಲಾಲ, ಗಣೇಶ ಪಾಟೀಲ್, ಪರಶುರಾಮ, ವಿಶ್ವಕುಮಾರ, ವೀರೇಶರಡ್ಡಿ ಯಾಳಗಿ, ಮಲ್ಲು ಕಾಮರೆಡ್ಡಿ, ಶರಬು ನಾಟೇಕಾರ, ಲಕ್ಷ್ಮೀಕಾಂತ ಲಿಂಗೇರಿ ಇತರರಿದ್ದರು.

    ಶಹಾಪುರದಲ್ಲಿ ತಾಲೂಕು ಪತ್ರಕರ್ತರ ಸಂಘದಿಂದ ಹೊಳಿಮಠ ಅವರಿಗೆ ಶ್ರದ್ಧಾಂಜಲಿ ಅಪರ್ಿಸಲಾಯಿತು. ಅಧ್ಯಕ್ಷ ಮಲ್ಲಿಕಾಜರ್ುನ ಮುದ್ನೂರ, ರಾಘವೇಂದ್ರ ಹಾರಣಗೇರ, ವಿಶಾಲ್ ಶಿಂಧೆ, ಮಲ್ಲಯ್ಯ ಪೋಲಂಪಲ್ಲಿ, ಚಂದ್ರು ಕಟ್ಟಿಮನಿ, ನಾಗೇಂದ್ರ ಸಿಂಗ್, ಭಾಗಪ್ಪ ರಸ್ತಾಪುರ, ರಾಜೇಂದ್ರ ಗುತ್ತೇದಾರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts