ಯಾದಗಿರಿ: ಶುಕ್ರವಾರ ತಡರಾತ್ರಿಯಿಂದ ಜಿಲ್ಲಾದ್ಯಂತ ಭಾರಿ ಮಳೆಯಾಗುತ್ತಿದ್ದು, ನಗರ ಸೇರಿದಂತೆ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ.
ಮಳೆಯಿಂದಾಗಿ ಜಿಲ್ಲೆಯಲ್ಲಿ ರೈತರು ಬೆಳೆದ ಹತ್ತಿ, ತೊಗರಿ, ಭತ್ತ ಮತ್ತು ಮೆಣಸಿನಕಾಯಿ ಬೆಳೆಗಳು ಸಂಪೂರ್ಣ ಜಲಾವೃತಗೊಂಡಿವೆ. ಹಲವು ಹಳ್ಳಿಗಳಲ್ಲಿನ ಕೆರೆಗಳು ಭತರ್ಿಯಾಗಿದ್ದು, ಕೋಡಿ ಒಡೆಯುವ ಸಾಧ್ಯತೆ ದಟ್ಟವಾಗಿದೆ. ಇನ್ನೂ ಭಾರಿ ಮಳೆಯಿಂದ ಶಹಾಪುರ ನಗರ ಚರ ಬಸವೇಶ್ವರ ಬಡಾವಣೆಯಲ್ಲಿ ಸಿದ್ದಲಿಂಗೇಶ್ವರ ಕೆರೆ ನೀರು ಹರಿದು, ರಸ್ತೆ ಬದಿ ನಿಲ್ಲಿಸಲಾಗಿದ್ದ ಬೈಕ್ ಮತ್ತು ಕಾರಿಗಳು ನೀರಿನಲ್ಲ ಕೊಚ್ಚಿ ಹೋಗಿವೆ.