More

    ಗಾಂಧೀಜಿ ಆದರ್ಶ ಪಾಲಿಸೋಣ

    ಲಕ್ಷ್ಮೇಶ್ವರ: ಬಿಜೆಪಿ ಲಕ್ಷೆ್ಮೕಶ್ವರ ನಗರ ಘಟಕದಿಂದ ಶುಕ್ರವಾರ ಗಾಂಧೀಜಿ ಮತ್ತು ಲಾಲ್ ಬಹಾದೂರ್ ಶಾಸ್ತ್ರೀಯವರ ಜಯಂತಿಯನ್ನು ಸ್ವಚ್ಛತಾ ಕಾರ್ಯ ಕೈಗೊಳ್ಳುವ ಮೂಲಕ ಆಚರಿಸಲಾಯಿತು.

    ಬಿಜೆಪಿ ಕಾರ್ಯಕರ್ತರು ಪಟ್ಟಣದಲ್ಲಿನ ಗಾಂಧೀ ವೃತ್ತ, ಪಂಪ ವೃತ್ತ, ವೀರರಾಣಿ ಕಿತ್ತೂರ ಚನ್ನಮ್ಮ ವೃತ್ತ, ವಿದ್ಯಾರಣ್ಯರ ವೃತ್ತ, ಆದಯ್ಯ ವೃತ್ತಗಳನ್ನು ಸ್ವಚ್ಛಗೊಳಿಸಿ ಮೂರ್ತಿಗಳಿಗೆ ಪೂಜೆ ಸಲ್ಲಿಸಿದರು. ಬಳಿಕ ಪಂಪ ವೃತ್ತದಲ್ಲಿ ಗಾಂಧೀ ಮತ್ತು ಶಾಸ್ತ್ರೀಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸ್ಮರಣೆಗೈದರು.

    ಈ ವೇಳೆ ಗದಗ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪೂರ್ಣಾಚೆ ಖರಾಟೆ ಮಾತನಾಡಿದರು.

    ಸೋಮೇಶ ಉಪನಾಳ, ಗಂಗಾಧರ ಮೆಣಸಿನಕಾಯಿ, ದುಂಡೇಶ ಕೊಟಗಿ, ಬಸಣ್ಣ ಮಜ್ಜಿಗುಡ್ಡದ, ಚಂದ್ರು ಹಂಪಣ್ಣವರ, ವಿಜಯ ಪಾಟೀಲ, ಜಾಹೀರ ಮೋಮಿನ್, ರುದ್ರಪ್ಪ ಉಮಚಗಿ, ಬಾಬಣ್ಣ ವೇರ್ಣೆಕರ, ಅಶೋಕ ನೀರಾಲೋಟಿ, ರಮೇಶ ಹಾಳದೋಟದ, ಗಿರೀಶ ಚೌರಡ್ಡಿ, ಬಸವರಾಜ ಚರ್ಕಸಾಲಿ, ವಿಶಾಲ ಬಟಗುರ್ಕಿ, ಅರುಣ ಪಾಟೀಲ, ಅನಿಲ ಮುಳಗುಂದ, ಪ್ರಕಾಶ ಬೆಂತೂರ, ಸಿದ್ದು ದುರಗಣ್ಣವರ, ಹನುಮಂತ ಜಾಲಿಮರದ, ವಿಜಯ ಕುಂಬಾರ, ಗಂಗಾಧರ ಶಿರಹಟ್ಟಿ, ನಾಗೇಶ ಅಮರಾಪುರ, ಸಂತೋಷ ಜಾವೂರ, ಪ್ರಮೋದ ಖರಾಟೆ, ಮಂಜುನಾಥ ಉಳ್ಳಾಗಡ್ಡಿ, ಜಗದೀಶ ಪಾಟೀಲ ಇತರರಿದ್ದರು.</

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts