More

    ಗಾಂಜಾ ಮತ್ತಿನಲ್ಲಿ ಕಲ್ಲೂ ತೂರಿ ದಾಂಧಲೆ

    ಶಿವಮೊಗ್ಗ: ನಗರ ಹೊರವಲಯದ ಸೋಮಿನಕೊಪ್ಪ-ಗೆಜ್ಜೇನಹಳ್ಳಿ ರಸ್ತೆಯ ಬಾರ್ ಆಂಡ್ ರೆಸ್ಟೋರೆಂಟ್ ಹಾಗೂ ಸ್ಥಳೀಯ ಆಟೋ ಕಾಲನಿ ಕೆಲ ಮನೆಗಳಿಗೆ ಗಾಂಜಾ ಮತ್ತಿನಲ್ಲಿ ನುಗ್ಗಿದ ಕಿಡಿಗೇಡಿಗಳು ಕಲ್ಲು ತೂರಿ ದಾಂಧಲೆ ನಡೆಸಿದ್ದಾರೆ.

    ಸೋಮಿನಕೊಪ್ಪದ ಮುರ್ನಾಲ್ಕು ಯುವಕರ ಗುಂಪೊಂದು ಶನಿವಾರ ಬೆಳ್ಳಂಬೆಳ್ಳಗೆ ಗಾಂಜಾ ಮತ್ತಿನಲ್ಲಿ ಬಂದು ಬಾರ್​ನಲ್ಲಿ ಗಲಾಟೆ ಮಾಡಿದೆ. ಬಾರ್ ಮಾಲೀಕರು ಯುವಕರನ್ನು ಹೊರಗೆ ಕಳಿಸಲು ಯತ್ನಿಸಿದ್ದು ಹೊರ ಹೋಗದೇ ಬಾರ್​ನ ಬ್ಯಾನರ್ ಕಿತ್ತುಹಾಕಿದ್ದಾರೆ. ಅಲ್ಲದೆ, ಬಾರ್ ಹಾಗೂ ಪಕ್ಕದ ಮನೆಗಳ ಮೇಲೆ ಕಲ್ಲು ತೂರಿ ಗಲಾಟೆ ಮಾಡಿದ್ದಾರೆ.

    ಘಟನೆ ವಿವರ: ಜು.27ರ ಸಂಜೆ 7ಕ್ಕೆ ಬಾರ್ ಆಂಡ್ ರೆಸ್ಟೋರೆಂಟ್​ಗೆ ಬಂದಿದ್ದ ಕಿಡಿಗೇಡಿಗಳು ಅಲ್ಲಿನ ಸಿಬ್ಬಂದಿಯನ್ನು ನಿಂದಿಸಿ ಮದ್ಯ ಕೊಡುವಂತೆ ಒತ್ತಾಯಿಸಿದ್ದರು. ನಿರಾಕರಿಸಿದ ಸಿಬ್ಬಂದಿಗೆ ಮಾರಣಾಂತಿಕ ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದರು. ಈ ಸಂಬಂಧ ಬಾರ್ ಮಾಲೀಕ ವಿನೋಬನಗರ ಪೊಲೀಸರಿಗೆ ದೂರು ನೀಡಿದ್ದರು. ಇದರಿಂದ ರೊಚ್ಚಿಗೆದ್ದ ಕಿಡಿಗೇಡಿಗಳು ಶನಿವಾರ ಬೆಳಗ್ಗೆ ಮತ್ತೆ ಬಾರ್​ಗೆ ಬಂದು ದಾಂಧಲೆ ಮಾಡಿದ್ದಾರೆ.

    ಆಟೋ ಕಾಲನಿಯಲ್ಲಿ ಮನೆಗಳ ಬಳಿ ಗಲಾಟೆ ಮಾಡಿದ್ದಾರೆ. ಘಟನೆಯಿಂದ ಜನ ಭಯಭೀತರಾಗಿದ್ದು, ಪೊಲೀಸರು ಕ್ರಮ ಕೈಗೊಳ್ಳಬೇಕಿದೆ. ಮಚ್ಚು, ಲಾಂಗು ಹಿಡಿದು ಅಸಭ್ಯವಾಗಿ ವರ್ತಿಸುತ್ತಿರುವ ಕಿಡಿಗೇಡಿಗಳನ್ನು ಮಟ್ಟಹಾಕಬೇಕಿದೆ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts