ಬೆಳಗಾವಿ: ನಗರದ ವಿಜಯ ಸ್ಕಾೃನ್ ಆ್ಯಂಡ್ ಡಯಗ್ನೋಸ್ಟಿಕ್ ಸೆಂಟರ್ನಲ್ಲಿ ‘32 ಸ್ಲೈಸ್ ಸಿಟಿ ಸ್ಕಾೃನ್’ ಯಂತ್ರದ ಉದ್ಘಾಟನಾ ಕಾರ್ಯಕ್ರಮ ಶನಿವಾರ ಜರುಗಿತು. ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಮಾತನಾಡಿ, ಗಡಿಭಾಗದ ಜನರಿಗೆ ಉತ್ತಮ ಸೇವೆ ಒದಗಿಸುವಲ್ಲಿ ಈ ಸೆಂಟರ್ ಮುಂಚೂಣಿಯಲ್ಲಿದೆ. ಸಾರ್ವಜನಿಕರು ಇಲ್ಲಿ ಲಭ್ಯವಿರುವ ಹೈಟೆಕ್ ಸೌಲಭ್ಯಗಳ ಲಾಭ ಪಡೆದುಕೊಳ್ಳಬೇಕು ಎಂದರು.
ಮಾಜಿ ಶಾಸಕರಾದ ಫಿರೋಜ್ ಸೇಠ್, ಸಂಜಯ ಪಾಟೀಲ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್.ವಿ. ಮುನ್ಯಾಳ, ತಾಲೂಕು ಆರೋಗ್ಯಾಧಿಕಾರಿ ಶಿವಾನಂದ ಮಾಸ್ತಿಹೊಳಿ, ರೆಡಿಯಾಲಜಿಸ್ಟ್ ಡಾ.ವಿಜಯ ಚವ್ಹಾಣ, ಡಾ.ಸುನೀತಾ ಚವ್ಹಾಣ ಇತರರಿದ್ದರು.