More

    ಕೂಲಿಕಾರರಿಗೆ ಆಹಾರ ಧಾನ್ಯಗಳ ಕಿಟ್ ವಿತರಣೆ

    ಕಲಘಟಗಿ: ಕರೊನಾ ಭೀತಿಯಿಂದಾಗಿ ಕೂಲಿ ಕಾರ್ವಿುಕರು ಸಂಕಷ್ಟಕ್ಕೆ ಸಿಲುಕಿರುವುದನ್ನು ಮನಗಂಡು ರಾಜ್ಯ ಸರ್ಕಾರ ಬಡವರಿಗಾಗಿ ಆಹಾರ ಧಾನ್ಯಗಳ ಕಿಟ್ ವಿತರಿಸುತ್ತಿದೆ ಎಂದು ಶಾಸಕ ಸಿ.ಎಂ. ನಿಂಬಣ್ಣವರ ಹೇಳಿದರು. ಕಾರ್ವಿುಕ ಇಲಾಖೆ ನೀಡಿದ ಆಹಾರ ಧಾನ್ಯಗಳ ಕಿಟ್​ಗಳ ವಿತರಣೆ ಕಾರ್ಯಕ್ರಮಕ್ಕೆ ಪಟ್ಟಣದ ನಾಗರಿಕ ಸೇವಾ ಕೇಂದ್ರದಲ್ಲಿ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು. ಇಂದು ಅಸಹಾಯಕರಿಗೆ ಅನುಕೂಲ ಕಲ್ಪಿಸುವ ಈ ಯೋಜನೆಗೆ ಸಾಂಕೇತಿಕವಾಗಿ ಚಾಲನೆ ನೀಡಲಾಗಿದೆ. ಇನ್ನುಳಿದ ಕಿಟ್​ಗಳನ್ನು ಪಪಂ ಮುಖ್ಯಾಧಿಕಾರಿ, ಎಲ್ಲ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಮೂಲಕ ತಾಲೂಕಿನ ಕಾರ್ವಿುಕರಿಗೆ ನೇರವಾಗಿ ಪೂರೈಸಲಾಗುವುದು. ತಹಸೀಲ್ದಾರ್, ಕಾರ್ವಿುಕ ಇಲಾಖೆ ಅಧಿಕಾರಿಗಳು ಇದರ ಉಸ್ತುವಾರಿ ನಿರ್ವಹಿಸುವರು ಎಂದರು. ತಹಸೀಲ್ದಾರ್ ಅಶೋಕ ಶಿಗ್ಗಾಂವಿ, ಸಿಪಿಐ ವಿಜಯ ಬಿರಾದಾರ, ಪಪಂ ಮುಖ್ಯಾಧಿಕಾರಿ ಚಂದ್ರಶೇಖರ ಬಿ., ಕಾರ್ವಿುಕ ಹಿರಿಯ ನಿರೀಕ್ಷಕ ಅಶೋಕ ಒಡೆಯರ, ಬಿಜೆಪಿ ತಾಲೂಕಾಧ್ಯಕ್ಷ ಬಸವರಾಜ ಶೆರೇವಾಡ, ನಿಂಗಪ್ಪ ಸುತಗಟ್ಟಿ, ಮಹಾಂತೇಶ ತಹಶೀಲ್ದಾರ, ಶಶಿಧರ ಹುಲಿಕಟ್ಟಿ, ಸಾಯಿನಾಥ ಯಲ್ಲಾಪುರಕರ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts