More

    ಕುಸ್ತಿಯಲ್ಲಿ ಸೋಲಿಸಿದ್ದಕ್ಕೆ ಕೊಲೆ ಮಾಡಿದ ಮೂವರು ಹಂತಕರಿಗೆ ಜೀವಾವಧಿ ಶಿಕ್ಷೆ

    ಬೀದರ್: ಕುಸ್ತಿಯಲ್ಲಿ ಸೋಲಿಸಿದ್ದಕ್ಕೆ ಕೊಲೆ ಮಾಡಿದ ಮೂವರಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 5000 ರೂ. ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ. ನಗರದ ಅಬ್ದುಲ್ ಫೈಜ್ ದರ್ಗಾ ನಿವಾಸಿಗಳಾದ ನೂರ್ ಶಾ, ರಿಜ್ವಾನ್ ಹಾಗೂ ಹೈದರಾಬಾದ್ನ ಅದ್ನಾನ್ ಅಯೂಬ್ ಜೀವಾವಧಿ ಶಿಕ್ಷೆಗೊಳಗಾದವರು. ಜಿಲ್ಲಾ ನ್ಯಾಯಾಧೀಶ ಬಸವರಾಜ ಚೇಗರಡ್ಡಿ ಇತ್ತೀಚೆಗೆ ತೀರ್ಪು ನೀಡಿದ್ದು, ದಂಡ ಕೊಡಲು ನಿರಾಕರಿಸಿದ್ದಲ್ಲಿ ಮೂರು ತಿಂಗಳು ಹೆಚ್ಚುವರಿ ಶಿಕ್ಷೆ ವಿಧಿಸಿದ್ದಲ್ಲದೆ ದೂರುದಾರ ಜೋಯಲ್ ಶಿವರಾಜಗೆ 30 ಸಾವಿರ ರೂ. ಪರಿಹಾರ ನೀಡಲು ಶಿಾರಸು ಮಾಡಿದ್ದಾರೆ. ಕೊಲೆಯಾದ ಕಾನನ್ ಕಾಲನಿಯ ಜೋಕಿಮ್ ಶಿವರಾಮ ಹಾಗೂ ನೂರ್ ಶಾ ಕುಸ್ತಿಪಟುಗಳು. ಇಬ್ಬರು ಬೀದರ್ ಉತ್ಸವ ಮತ್ತು ವಿವಿಧ ಜಾತ್ರೆಗಳಲ್ಲಿ ಕುಸ್ತಿ ಆಡಿದ್ದರು. ಕುಸ್ತಿಯಲ್ಲಿ ಸೋಲಿಸಿದ್ದರಿಂದ ಜೋಕಿಮ್ ಕೊಲೆಗೆ ನೂರ್ ಶಾ ಸ್ಕೆಚ್ ಹಾಕಿದ್ದಾನೆ. ನೂರ್ ಮತ್ತು ಇನ್ನಿಬ್ಬರು ಸೇರಿ 2015ರ ಜನವರಿ 30ರಂದು ಹೊಡೆದು ಕೊಲೆ ಮಾಡಿದ್ದರು. ಮಾರ್ಕೆಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಸಿಪಿಐ ರಾಘವೇಂದ್ರ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರ ಅಭಿಯೋಜಕ ಮಲ್ಲಿಕಾರ್ಜುನ ಪತ್ತಾರ ವಾದ ಮಂಡಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts