ಚಿತ್ರದುರ್ಗ: ನಗರದ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಮಹಾತ್ಮಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಗಣರಾಜ್ಯೋತ್ಸವ ಆಚರಿಸಲಾಯಿತು.
ಮಾಜಿ ಸಚಿವ ಎಚ್.ಆಂಜನೇಯ, ಜಿಲ್ಲಾಧ್ಯಕ್ಷ ಎಂ.ಕೆ.ತಾಜ್ಪೀರ್, ಮಹಿಳಾ ಜಿಲ್ಲಾಧ್ಯಕ್ಷೆ ಗೀತಾ ನಂದಿನಿಗೌಡ, ಮುಖಂಡರಾದ ಡಾ.ಬಿ.ತಿಪ್ಪೇಸ್ವಾಮಿ ಜೆ.ಜೆ.ಹಟ್ಟಿ, ಮೈಲಾರಪ್ಪ, ಸಂಪತ್ಕುಮಾರ್, ಪಾತ್ಯರಾಜನ್, ನರಸಿಂಹರಾಜು, ಮುದಸಿರ್, ಲಕ್ಷ್ಮಿಕಾಂತ್, ಅಲ್ಲಾಭಕ್ಷಿ, ಜಯಮ್ಮ, ಮೋಕ್ಷ ರುದ್ರಸ್ವಾಮಿ, ಲೋಕೇಶ್, ಸೈಯದ್ ಆಫಾಖ್ ಅಹ್ಮಮದ್ ಇತರರಿದ್ದರು.