ಕಾರವಾರ: ತಾಲೂಕಿನ ದೇವಳಮಕ್ಕಿ ಗ್ರಾಪಂ ವ್ಯಾಪ್ತಿಯ ಬರ್ಗಲ್ ಗ್ರಾಮದ ಕವಲಮಕ್ಕಿಯಲ್ಲಿ ಹುಲ್ಲಿನ ಬಣವೆ ಸುಟ್ಟು ಭಸ್ಮವಾಗಿದೆ.
ಗದ್ದೆಯಲ್ಲೇ ಹುಲ್ಲಿನ ಬಣವೆ ಒಟ್ಟಲಾಗಿತ್ತು. ಪಕ್ಕದಲ್ಲೇ ಹಾದು ಹೋದ ವಿದ್ಯುತ್ ತಂತಿಯಿಂದ ಬೆಂಕಿ ತಗುಲಿದೆ. ಕ್ಷಣ ಮಾತ್ರದಲ್ಲಿ ನಾಲ್ವರು ರೈತರಿಗೆ ಸೇರಿದ ಅಂದಾಜು 9 ಸಾವಿರ ಕಟ್ಟುಗಳು ಸುಟ್ಟು ಭಸ್ಮವಾಗಿವೆ. ಸಂಬಂಧಪಟ್ಟ ಇಲಾಖೆ ನೆರವು ನೀಡಬೇಕು ಎಂದು ರೈತರು ಮನವಿ ಮಾಡಿದ್ದಾರೆ.