More

    ಕರೊನಾ ಸೇನಾನಿಗಳಿಗೆ ಕಾಟಾಚಾರದ ಗೌರವ

    ಭಟ್ಕಳ: ನಿಜವಾದ ಕರೊನಾ ಸೇನಾನಿಗಳನ್ನು ಗೌರವಿಸುವಲ್ಲಿ ತಾಲೂಕಾಡಳಿತ ಎಡವಿದೆ ಎಂದು ತಂಜಿಂನ ಸದಸ್ಯರು, ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಜಿಲ್ಲೆಯಲ್ಲಿ ಮೊದಲ ಬಾರಿಗೆ ಕರೊನಾ ವೈರಾಣು ಭಟ್ಕಳಕ್ಕೆ ಕಾಲಿಟ್ಟಾಗ ಎಲ್ಲರಲ್ಲೂ ವಿಚಿತ್ರವಾದ ಭಯವಿತ್ತು. ರೋಗದ ಕುರಿತು ಸರಿಯಾದ ತಿಳಿವಳಿಕೆ ಇಲ್ಲದ ಸಮಯದಲ್ಲೂ ಭಟ್ಕಳದ ತಂಜಿಂ ಸಂಸ್ಥೆ ಸ್ವಯಂ ಪ್ರೇರಿತವಾಗಿ ಮುಂದೆ ಬಂದು ಸ್ವಯಂ ಸೇವಕರ ತಂಡವನ್ನೆ ನಿರ್ವಿುಸಿ ಸೇವೆ ಸಲ್ಲಿಸಿತ್ತು. ವಿದೇಶದಿಂದ ಬಂದವರ ಮನೆಗೆ ತೆರಳಿ ಅವರಿಗೆ ಕ್ವಾರಂಟೈನ್​ಗೆ ಹೋಗುವಂತೆ ಮನವೊಲಿಸಿತ್ತು. ಅಲ್ಲದೆ, ಗಂಟಲ ದ್ರವ ಪರೀಕ್ಷೆ ನಡೆಸಲು ತಾಲೂಕಾಡಳಿತಕ್ಕೆ ವಿವಿಧ ರೀತಿಯಲ್ಲಿ ನೆರವು ನೀಡಿತ್ತು. ಸರ್ಕಾರಿ ಕ್ವಾರಂಟೈನ್​ನಲ್ಲಿ ಹೋಗಲು ಒಪ್ಪದವರಿಗೂ ಅಂಜುಮನ್ ಹಾಸ್ಟೇಲಿನಲ್ಲಿ ಉಳಿಯಲು ವ್ಯವಸ್ಥೆ ಕಲ್ಪಿಸಿತ್ತು. ನಂತರ ಕೋವಿಡ್ ಕೇರ್ ಸೆಂಟರ್ ಮಾಡುವ ಸಂದರ್ಭದಲ್ಲೂ ತಂಜಿಂ ಮುಂದೆ ಬಂದು ವುಮೆನ್ಸ್ ಸೆಂಟಿರ್​ನಲ್ಲಿ ಅವಕಾಶ ಕಲ್ಪಸಿತ್ತು. ಆದರೆ, ಕರೊನಾ ಸೇನಾನಿಗಳ ಗೌರವಿಸುವ ಸಂದರ್ಭದಲ್ಲಿ ತನಗೆ ಬೇಕಾದವರ ಪಟ್ಟಿ ತಯಾರಿಸಿ ಅವರನ್ನು ಮಾತ್ರ ಗೌರವಿಸಿದೆ. ಕನಿಷ್ಠ ಸೌಜನ್ಯಕ್ಕೂ ತಂಜಿಂನ ಹೆಸರು ಹೇಳಲಿಲ್ಲ ಎಂದು ಸಮಾರಂಭಕ್ಕೆ ಬಂದಿದ್ದ ಸಾರ್ವಜನಿಕರು ಹಾಗೂ ತಂಜಿಂನ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

    ಸಾರ್ವಜನಿಕರ ಅಸಮಾಧಾನ ತೀವ್ರವಾಗುತ್ತಿರುವಂತೆ ಎಎಸ್​ಪಿ ನಿಖಿಲ್, ತಂಜಿಂ ಉಪಾಧ್ಯಕ್ಷ ಇನಾಯಿತ್ ಉಲ್ಲಾ ಶಾಬಂದ್ರಿ, ಅತೀಕುರ್ ರೆಹಮಾನ್ ಮುನೀರ ಹಾಗೂ ಇತರರನ್ನು ಸಮಾಧಾನ ಪಡಿಸಲು ಯತ್ನಿಸಿದರು. ನಂತರ ಅವರನ್ನು ಗೌರವಿಸಲು ಕರೆದಾಗ ತಂಜಿಂ ಅದನ್ನು ತಿರಸ್ಕರಿಸಿತು. ಭಟ್ಕಳ ಅರ್ಬನ್ ಬ್ಯಾಂಕಿನ ಅಧ್ಯಕ್ಷರು ಕೂಡ ಗೌರವ ಸ್ವೀಕರಿಸಲಿಲ್ಲ. ಅಲ್ಲದೆ, ಲಾಕ್​ಡೌನ್ ಸಂದರ್ಭದಲ್ಲಿ ಸತತ 3 ತಿಂಗಳ ಕಾಲ ಮಧ್ಯಾಹ್ನ ಮತ್ತು ಸಂಜೆ ಊಟ ತಯಾರಿಸಿ ನೀಡುತ್ತಿದ್ದ ಸರ್ಪನಕಟ್ಟೆ ಸ್ಪೋರ್ಟ್ಸ್ ಕ್ಲಬ್​ನ ಸದಸ್ಯರನ್ನು ಕಡೆಗಣಿಸಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts