ಯಾದಗಿರಿ: ಸದೃಢ ಭಾರತ ನಿಮರ್ಾಣಕ್ಕಾಗಿ ಪ್ರತಿಯೊಬ್ಬರೂ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಮೂಲಕ ಕಡ್ಡಾಯವಾಗಿ ಮತದಾನ ಮಾಡುವಂತೆ ಜಿಲ್ಲಾಕಾರಿ ಸ್ನೇಹಲ್ ಆರ್., ಕರೆ ನೀಡಿದರು.
ಚುನಾವಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ಸಂಯುಕ್ತಾಶ್ರಂನಗರದ ಪದವಿ ಕಾಲೇಜು ಮುಂಭಾಗದಲ್ಲಿ ಸೈಕ್ಲೋಥಾನ್ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಿ ಬೆಳೆಸಲು ಹಾಗೂ ನಮ್ಮ ಮುಂದಿನ ಉತ್ತಮ ಭವಿಷ್ಯ ನಿಮರ್ಾಣಕ್ಕಾಗಿ ಚುನಾವಣೆಗಳಲ್ಲಿ ಪ್ರತಿಯೊಬ್ಬರೂ ತಪ್ಪದೇ ಮತ ಚಲಾಯಿಸಬೇಕು. ಭಾರತದ ಪ್ರತಿಯೊಬ್ಬ ಪ್ರಜೆಗೂ 1950ರ ಪ್ರಜಾಪ್ರಭುತ್ವ ಕಾಯ್ದೆ ಪ್ರಕಾರ ಸಂವಿಧಾನ ಚುನಾವಣೆಯಲ್ಲಿ ಸಮಾನವಾಗಿ ಮತದಾನ ಮಾಡುವ ಹಕ್ಕು ಒದಗಿಸಿದೆ ಎಂದರು.
ಜಾಥಾ ಕಾರ್ಯಕ್ರಮವು ನಗರದ ಸಕರ್ಾರಿ ಪ್ರಥಮ ದಜರ್ೆ ಪದವಿ ಮಹಾವಿದ್ಯಾಲಯದಿಂದ ಸುಭಾಷ ವೃತ್ತ, ಹೊಸ ಬಸ್ ನಿಲ್ದಾಣ, ಹೊಸ ಹಳ್ಳಿ ಕ್ರಾಸ್, ಲುಂಬಿನಿ ಗಾರ್ಡನ್ ಗೆ ತಲುಪಿ ಮುಕ್ತಾಯವಾಯಿತು.
ಜಿಪಂ ಸಿಇಒ ಗರಿಮಾ ಪನ್ವಾರ್, ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಡಾ.ಸಿ.ಬಿ ವೇದಮೂತರ್ಿ, ಹಿಂದುಳಿದ ವರ್ಗಗಳ ಕಲ್ಯಾಣಾಕಾರಿ ರಾಘವೇಂದ್ರ, ಕ್ರೀಡಾ ಇಲಾಖೆ ಅಕಾರಿ ರಾಜು ಬಾವಿಹಳ್ಳಿ, ತಾಪಂ ಇಒ ಬಸವರಾಜ ಶರಬೈ, ಸಿದ್ದರೆಡ್ಡಿ ಇದ್ದರು.