ಚಿತ್ರದುರ್ಗ: ನಗರದ ಎಸ್ಆರ್ಎಸ್ ಪಿಯು ಕಾಲೇಜಿನಲ್ಲಿ ಜು.15ರಂದು, ರಾಷ್ಟ್ರ, ರಾಜ್ಯಮಟ್ಟದ ನೀಟ್, ಜೆಇಇ, ಸಿಇಟಿ ಹಾಗೂ ಸಿಎ ವಿಭಾಗಗಳ ಸಾಧಕರರೊಂದಿಗೆ ಸಂವಾದ ‘ಸ್ಫೂರ್ತಿಯಿಂದ ಸ್ಫೂರ್ತಿಯೆಡೆಗೆ’ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಬೆಳಗ್ಗೆ 10.30 ಕ್ಕೆ ಕಾಲೇಜಿನ ಅನಂತಕೃಷ್ಣ ವೇದಿಕೆಯಲ್ಲಿ ಆಯೋಜಿಸಿರುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಆರ್ಎಸ್ ಸಮೂಹ ಶಿ ಕ್ಷಣ ಸಂಸ್ಥೆಗಳ ಅಧ್ಯಕ್ಷ ಬಿ. ಎ.ಲಿಂಗಾರೆಡ್ಡಿ ಅವರು ವಹಿಸಲಿದ್ದಾರೆ.
ಬೆಳಗಾವಿ ರಾಣಿ ಚನ್ನಮ್ಮ ವಿವಿಧ ವಾಣಿಜ್ಯ ಮತ್ತು ನಿರ್ವಹಣಾ ಶಾಸ್ತ್ರ ವಿಭಾಗದ ಡೀನ್ ಡಾ.ಸಿ.ಎಂ.ತ್ಯಾಗರಾಜ್ ಉದ್ಘಾಟಿಸಲಿದ್ದಾರೆ. ಎ ಸ್ಆರ್ಎಸ್ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಡಾ.ಡಿವಿಎನ್ ರಾವ್, ಬೋಶ್ ಸಂಸ್ಥೆ ಸೀನಿಯರ್ ಸಾಫ್ಟ್ವೇರ್ ಇಂಜಿನಿಯರ್ ಪವನ್ಗೀಬರ್ ಅತಿಥಿಗಳಾಗಿ ಆಗಮಿಸಲಿದ್ದಾರೆ. ಪ್ರಾಚಾರ್ಯ ಇ.ಗಂಗಾಧರ್, ಎಸ್ಆರ್ಎಸ್ ಸಮೂಹ ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ಡಾ. ಟಿ.ಎಸ್.ರವಿ ಉಪಸ್ಥಿತರಿರುತ್ತಾರೆ.