More

    ಎಲ್ಲ ರಂಗಗಳ ಅಭಿವೃದ್ಧಿಯೇ ಧ್ಯೇಯ

    ಕುಮಟಾ: ಶಾಸಕ ದಿನಕರ ಶೆಟ್ಟಿ ಅವರ 64ನೇ ಜನ್ಮದಿನದ ಪ್ರಯುಕ್ತ ಅವರ ಅಭಿಮಾನಿ ಬಳಗ, ಬಿಜೆಪಿ ಪ್ರಮುಖರು, ಪಕ್ಷದ ಕಾರ್ಯಕರ್ತರು, ಅಧಿಕಾರಿ ವರ್ಗದವರು ಶಾಸಕರ ಗೃಹ ಕಚೇರಿಗೆ ಬುಧವಾರ ತೆರಳಿ ಶುಭಾಶಯ ಕೋರಿದರು.

    ವಿವಿಧ ಗ್ರಾಮಗಳ ಕಾರ್ಯಕರ್ತರು ಶಾಸಕರ ಮನೆಗೆ ತೆರಳಿ ದಿನಕರ ಶೆಟ್ಟಿ ಅವರಿಗೆ ಶುಭಾಶಯ ಕೋರಿ ಅವರೊಂದಿಗೆ ಸೆಲ್ಪಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ದಿನಕರ ಶೆಟ್ಟಿ ಅವರು ಮನೆಗೆ ಬಂದವರಿಗೆ ಸಿಹಿ ವಿತರಿಸಿದರು. ಬಳಿಕ ಮಾತನಾಡಿದ ಶಾಸಕ ದಿನಕರ ಶೆಟ್ಟಿ, ಕರೊನಾ ಹಿನ್ನೆಲೆಯಲ್ಲಿ ಎರಡು ವರ್ಷಗಳಿಂದ ನಾನು ಜನ್ಮದಿನ ಆಚರಿಸಿಕೊಳ್ಳುತ್ತಿಲ್ಲ. ಜನರು ಕಷ್ಟದ ಪರಿಸ್ಥಿತಿಯಲ್ಲಿರುವಾಗ ನಾವು ಸಂಭ್ರಮಿಸುವುದು ಸರಿಯಲ್ಲ. ಹೀಗಾಗಿ, ಪಕ್ಷದ ಕಾರ್ಯಕರ್ತರಿಗೂ ಈ ಬಗ್ಗೆ ಮೊದಲೇ ತಿಳಿಸಿದ್ದೆ. ಆದರೂ ಪ್ರೀತಿ, ಅಭಿಮಾನದಿಂದ ನೂರಾರು ಜನ ಭೇಟಿ ನೀಡಿ ಶುಭಾಶಯ ಕೋರಿದ್ದಾರೆ ಎಂದರು.

    ಜನರ ಸಮಸ್ಯೆ ಗಳಿಗೆ ಸ್ಪಂದಿಸುವುದು, ಆಯಾ ಭಾಗಗಳಿಗೆ ಅಗತ್ಯವಿರುವ ಸೌಕರ್ಯಗಳನ್ನು ಕಲ್ಪಿಸುವುದು, ಹೆಚ್ಚೆಚ್ಚು ಅನುದಾನ ಗಳನ್ನು ತಂದು ಎಲ್ಲ ರಂಗಗಳ ಅಭಿವೃದ್ಧಿ ಮಾಡುವುದೇ ನನ್ನ ಪರಮ ಉದ್ದೇಶವಾಗಿದೆ. ನನ್ನ ಆಡಳಿತ, ಕಾರ್ಯ ವೈಖರಿ ಬಗ್ಗೆ ನಾನು ಹೊಗಳಿ ಕೊಳ್ಳುವುದಿಲ್ಲ. ಆದರೆ, ಜನರ ಬಾಯಿಂದಲೇ ಆ ಮಾತು ಕೇಳುತ್ತಿದ್ದೇನೆ. ಈ ಬಗ್ಗೆ ಹೆಮ್ಮೆ ಇದೆ. ಕ್ಷೇತ್ರದ ಜನರ ಜತೆಗೆ ನಾನು ಸದಾ ಇದ್ದೇನೆ.

    | ದಿನಕರ ಶೆಟ್ಟಿ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts