ಜೊಯಿಡಾ: ಅಕ್ರಮವಾಗಿ ಉಸುಕು ಸಾಗಿಸುತ್ತಿದ್ದ ಟ್ರ್ಯಾಕ್ಟರ್ವೊಂದನ್ನು ತಾಲೂಕಿನ ಜಗಲಬೇಟದಲ್ಲಿ ಶುಕ್ರವಾರ ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.
ಉಪ ವಿಭಾಗಾಧಿಕಾರಿ ಪ್ರೀಯಾಂಗಾ ಅವರು ಜೊಯಿಡಾದಿಂದ ರಾಮನಗರಕ್ಕೆ ತೆರಳುವ ವೇಳೆ ಗಣೇಶಗುಡಿ ಮತ್ತು ಜಗಲಬೇಟ ಮಧ್ಯೆ ಟ್ರ್ಯಾಕ್ಟರ್ನಲ್ಲಿ ಉಸುಕು ಸಾಗಿಸಲಾಗುತ್ತಿತ್ತು. ಅದನ್ನು ಗಮನಿಸಿ ವಾಹನ ತಡೆದು ವಿಚಾರಿಸಿದರು. ಬಳಿಕ ಜೊಯಿಡಾ ತಹಸೀಲ್ದಾರ್ ಸಂಜಯ ಕಾಂಬಳೆ ಅವರೊಂದಿಗೆ ಮಾತನಾಡಿ, ಈ ಬಗ್ಗೆ ಪರಿಶೀಲಿಸಿ ಪ್ರಕರಣ ದಾಖಲಿಸುವಂತೆ ಆದೇಶಿಸಿದ್ದಾರೆ. ಯಾವುದೇ ಪಾಸ್ ಇಲ್ಲದೆ ಅಕ್ರಮವಾಗಿ ಉಸುಕು ಸಾಗಿಸುತ್ತಿದ್ದ ಪ್ರಶಾಂತ ಸುರೇಶ ಶಿರೋಡ್ಕರ ಅವರಿಗೆ ಸೇರಿದ ಟ್ರ್ಯಾಕ್ಟರ್ ಅನ್ನು ವಶಪಡಿಸಿಕೊಳ್ಳಲಾಗಿದೆ.