ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಮಧ್ಯವರ್ತಿ ಸ್ಥಳವಾದ ಕುಮಟಾ ತಾಲೂಕಿನಲ್ಲಿ ಕಾರ್ವಿುಕರ ರಾಜ್ಯ ವಿಮಾ ನಿಗಮ (ಇಎಸ್ಐಸಿ) ದಿಂದ ಚಿಕಿತ್ಸಾಲಯ ಹಾಗೂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮಂಜೂರಾಗಿ ಶೀಘ್ರ ಕಾರ್ಯನಿರ್ವಹಿಸುವಂತಾಗಬೇಕಿದೆ.
ಜಿಲ್ಲೆಯಲ್ಲಿ ಇಎಸ್ಐಸಿ ಯೋಜನೆ 2016 ಮೇ 1ರಿಂದಲೇ ಜಾರಿಯಲ್ಲಿದ್ದು, 23000ಕ್ಕೂ ಅಧಿಕ ವಿಮಾದಾರರಿದ್ದಾರೆ. ಯೋಜನೆ ಜಾರಿಯಾಗಿ 4 ವರ್ಷಗಳಾದರೂ ಜಿಲ್ಲೆಯ ವಿಮಾದಾರರಿಗೆ ವೈದ್ಯಕೀಯ ಸೌಲಭ್ಯವನ್ನು ಸಮರ್ಪಕವಾಗಿ ಒದಗಿಸಿಲ್ಲ. ಇದರಿಂದಾಗಿ ಸಾವಿರಾರು ಬಡ ಕಾರ್ವಿುಕರು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಸದ್ಯ ಕುಮಟಾದಲ್ಲಿ ಕೊಂಕಣ ಎಜುಕೇಶನ್ ಟ್ರಸ್ಟ್ನಿಂದ ನಿರ್ವಹಿಸಲ್ಪಡುತ್ತಿರುವ ಇಎಸ್ಐಸಿಯ ಮಾರ್ಪಡಿಸಿದ ಉದ್ಯೋಗದಾತರ ಉಪಯೋಗಿ ಚಿಕಿತ್ಸಾಲಯ (ಎಂಇಯುಡಿ) ಡಿಸ್ಪೆನ್ಸರಿ ಕೇವಲ ಒಬ್ಬ ಪ್ರಾಸಂಗಿಕ ವೈದ್ಯರನ್ನು ಒಳಗೊಂಡಿದ್ದು ನೆಪಮಾತ್ರಕ್ಕೆ ಎಂಬಂತಿದೆ.
3000ಕ್ಕೂ ಹೆಚ್ಚು ಕಾರ್ವಿುಕ ಚಂದಾದಾರರಿರುವ ಪ್ರದೇಶದಲ್ಲಿ ಇಎಸ್ಐಸಿ ಆಸ್ಪತ್ರೆ ತೆರೆಯಲು ಅವಕಾಶವಿದೆ. ಆದರೆ, ದಾಂಡೇಲಿಯಲ್ಲಿ ಮಾತ್ರ ಇದೆ. ಕರಾವಳಿಗರಿಗೆ ಇದು ದೂರದ ಸ್ಥಳ. ತಾಲೂಕಿನ ಕಾರ್ವಿುಕರು, ಗುತ್ತಿಗೆದಾರರು, ಉದ್ದಿಮೆದಾರರು 2016ರಿಂದ ಇಎಸ್ಐಸಿಗೆ ಸತತವಾಗಿ ಮನವಿ ಮಾಡಿಕೊಳ್ಳುತ್ತಿದ್ದರೂ ಪ್ರಯೋಜನವಾಗಿಲ್ಲ. 5 ತಿಂಗಳ ಹಿಂದೆ ಸಚಿವ ಶಿವರಾಮ ಹೆಬ್ಬಾರ ಸೂಚನೆಯಂತೆ ಕುಮಟಾದಲ್ಲಿ ಪೂರ್ಣಕಾಲಿಕ ಇಎಸ್ಐಸಿ ಚಿಕಿತ್ಸಾಲಯ ಪ್ರಾರಂಭಿಸಲು ಪ್ರಸ್ತಾವನೆ ಸಲ್ಲಿಸುವಂತೆ ಕಾರ್ವಿುಕ ಇಲಾಖೆಗೆ ನೀಡಲಾದ ನಿರ್ದೇಶನ ಜಾರಿಗೆ ಬರಬೇಕಿದೆ. ಎಲ್ಲ ಕಾರ್ವಿುಕರನ್ನು ಇಎಸ್ಐಸಿಗೆ ಸೇರಿಸಲು ಸಾಮಾಜಿಕ ಭದ್ರತಾ ಅಧಿಕಾರಿಗಳು ಮುತುವರ್ಜಿ ವಹಿಸಬೇಕಿದೆ ಎಂಬುದು ಕಾರ್ವಿುಕರ ಕೋರಿಕೆಯಾಗಿದೆ.
ಇಎಸ್ಐಸಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಕೊಡಿ: ಜಿಲ್ಲೆಯಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಕೂಗು ಮುಗಿಲುಮುಟ್ಟಿದೆ. ರಾಜ್ಯ ಕಾರ್ವಿುಕ ಸಚಿವ ಶಿವರಾಮ ಹೆಬ್ಬಾರ ಜಿಲ್ಲೆಯವರೇ ಆಗಿರುವುದರಿಂದ ಸಮಸ್ಯೆಯ ಅರಿವು ಸ್ಪಷ್ಟವಿದೆ. ಇಎಸ್ಐಸಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮಂಜೂರು ಅತಿಕಷ್ಟದ ಕೆಲಸವೇನಲ್ಲ. ಇದರಿಂದ ಕಾರ್ವಿುಕರಿಗೆ ಮಾತ್ರವಲ್ಲದೆ ಜಿಲ್ಲೆಯ ಸಮಸ್ತ ಜನತೆಗೆ ಪ್ರಯೋಜನವಾಗಲಿದೆ. ಈ ಬಗ್ಗೆ ಸಚಿವ ಹೆಬ್ಬಾರ ಅವರಿಗೆ ಕುಮಟಾದಲ್ಲಿ ಮನವಿಯನ್ನೂ ಸಲ್ಲಿಸಲಾಗಿತ್ತು. ಕರೊನಾ ಮಹಾಮಾರಿಯ ಇಂಥ ಸಂದರ್ಭದಲ್ಲಾದರೂ ಜಿಲ್ಲೆಯ ರಾಜಕೀಯ, ಸಾಮಾಜಿಕ ಹಿತಾಸಕ್ತಿಗಳು ದೃಢ ಸಂಕಲ್ಪದೊಂದಿಗೆ ಜನರ ಆರೋಗ್ಯದತ್ತ ಗಮನಹರಿಸಬೇಕು. ಕುಮಟಾ ತಾಲೂಕಿನಲ್ಲೇ ಇಎಸ್ಐಸಿ ಡಿಸ್ಪೆನ್ಸರಿ ಹಾಗೂ ಇಎಸ್ಐಸಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮಂಜೂರು ಮಾಡಿಸಿ ಕಾರ್ಯ ನಿರ್ವಹಿಸುವಂತೆ ಮಾಡಬೇಕು. ನಿಯಮಾನುಸಾರ ಉತ್ತರ ಕನ್ನಡ ಜಿಲ್ಲೆಯು 300 ಹಾಸಿಗೆಗಳ ಮಲ್ಟಿಸ್ಪೆಷಾಲಿಟಿ ಇಎಸ್ಐಸಿ ಆಸ್ಪತ್ರೆ ತೆರೆಯಲು ಅರ್ಹವಾಗಿದೆ. ಅದನ್ನು ಜಿಲ್ಲೆಯ ಅತ್ಯಂತ ಸೂಕ್ತ ಕೇಂದ್ರ ಸ್ಥಾನವಾದ ಕುಮಟಾದಲ್ಲಿ ಸ್ಥಾಪಿಸಬಹುದಾಗಿದೆ. ಕಾರ್ವಿುಕ ವಿಮಾ ಯೋಜನೆ ವೈದ್ಯಕೀಯ ಸೇವೆಗಳ ನಿರ್ದೇಶನಾಲಯದಿಂದ ಈ ಬಗ್ಗೆ ಧನಾತ್ಮಕ, ಆಶಾದಾಯಕ ಪ್ರತಿಕ್ರಿಯೆಗಾಗಿ ಕಾರ್ವಿುಕ ವಿಮಾದಾರರು, ಸಾರ್ವಜನಿಕರು ಅನೇಕ ವರ್ಷಗಳಿಂದ ಕಾಯುತ್ತಿದ್ದಾರೆ.
ಜಿಲ್ಲೆಯ ಜನರ ಆರೋಗ್ಯಕ್ಕಾಗಿ ಮಧ್ಯವರ್ತಿ ಸ್ಥಳವಾದ ಕುಮಟಾದಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಾಗಿ ಈವರೆಗೆ ನಡೆಸಿದ ಯಾವ ಪ್ರಯತ್ನಗಳು ದಡ ಮುಟ್ಟುತ್ತಿಲ್ಲ. ಆದರೆ, ಇಎಸ್ಐಸಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ತೆರೆಯುವುದು ಸಾಧ್ಯವಿದೆ. ಜಿಲ್ಲೆಯ ಶಾಸಕರು, ಸಚಿವರು, ಸಂಸದರು ಬಲವಾದ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಿ ರಾಜ್ಯ ಹಾಗೂ ಕೇಂದ್ರದ ಸಹಯೋಗದಲ್ಲಿ ಈ ಕೆಲಸ ತುರ್ತಾಗಿ ಆಗುವಂತೆ ಪ್ರಯತ್ನಿಸಲಿ.
| ಚಿದಾನಂದ ಭಂಡಾರಿ
ಸಾಮಾಜಿಕ ಕಾರ್ಯಕರ್ತ, ಕೊಂಕಣಿ ಸಾಹಿತ್ಯ ಅಕಾಡೆಮಿ ಸದಸ್ಯ
ಜಿಲ್ಲೆಯಲ್ಲಿ ಇಎಸ್ಐ ಆಸ್ಪತ್ರೆ ಬೇಡಿಕೆ ಬಗ್ಗೆ ಡಿಸ್ಪೆನ್ಸರಿ ಕಾರ್ಯನಿರ್ವಹಿಸದ ವಿಚಾರ ಗಮನಕ್ಕಿದೆ. ಕಾರ್ವಿುಕರಿಗೆ ಉತ್ತಮ ಆರೋಗ್ಯ ಸೇವೆ ನೀಡುವ ವ್ಯವಸ್ಥೆ ಮಾಡಲು ಮಾತುಕತೆ ನಡೆದಿದೆ. ಇನ್ನೂ ಅಂತಿಮ ಹಂತಕ್ಕೆ ತಲುಪಿಲ್ಲ. ಶೀಘ್ರ ಈ ಸಂಬಂಧ ರ್ಚಚಿಸಿ ನಿರ್ಣಯ ಕೈಗೊಳ್ಳಲಾಗುವುದು.
ಶಿವರಾಮ ಹೆಬ್ಬಾರ, ಕಾರ್ವಿುಕ ಸಚಿವ