ಚಿತ್ರದುರ್ಗ:ಆಸ್ತಿ ವಿಚಾರಕ್ಕೆ ಒಡ ಹುಟ್ಟಿದವರ ನಡುವೆ ಗಲಾಟೆ ಸಹೋದರನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಹೊಸದುರ್ಗ ತಾಲೂಕು ಬೆಲಗೂರಲ್ಲಿ ಆರೋಪಿ ಸತೀಶ್ ತನ್ನ ತಮ್ಮ ಸಿದ್ದೇಶ್ನನ್ನು ಬಡಿಗಿಯಿಂದ ಹೊಡೆದು(38)ಕೊಲೆ ಮಾಡಿದ್ದಾನೆ ಎಂದು ಹೇಳಲಾಗಿದ್ದು, ಆರೋಪಿ ತಲೆ ಮರೆಸಿಕೊಂಡಿದ್ದಾನೆ. ಘಟನಾ ಸ್ಥಳಕ್ಕೆ ಸಿಪಿಐ ಮಧು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.