ಚಿತ್ರದುರ್ಗ:ನಗರದ ಶ್ರೀ ತಿಪ್ಪೇರುದ್ರಸ್ವಾಮಿ ಆಶ್ರಮದ ಸಂಪಿನಲ್ಲಿ ತಾಯಿ,ಮಗಳು ನಿಗೂಢವಾಗಿ ಮೃತಪಟ್ಟಿರುವ ಘಟನೆ ನಡೆದಿದೆ. ಇಲ್ಲಿನ ತು ರುವನೂರು ರಸ್ತೆಯಲ್ಲಿರುವ ಆಶ್ರಮದ ಸಂಪಿನಲ್ಲಿ ತಾಯಿ ಮತ್ತು ಮಗಳ ಶವ ಮಂಗಳವಾರ ರಾತ್ರಿ ಪತ್ತೆಯಾಗಿದ್ದು,ತಾಯಿ ಗೀತಾ(42)ಹಾಗೂ ಪುತ್ರಿ ಪ್ರಿಯಾಂಕಾ(22)ಮೃತಪಟ್ಟವರೆಂದು ಗುರುತಿಸಲಾಗಿದೆ.
ಗೀತಾ ಅವರ ಕುಟುಂಬ ತಿಪ್ಪೇರುದ್ರಸ್ವಾಮಿ ಆಶ್ರಮದಲ್ಲಿ ಪೂಜೆ ಮಾಡಿಕೊಂಡು ವಾಸವಿತ್ತು. ಮಂಗಳವಾರ ಸಂಜೆ ಆಶ್ರಮದಿಂದ ಪತಿ ಮತ್ತು ಮಗ ಹೊರಗೆ ಹೋಗಿದ್ದರು. ರಾತ್ರಿ ಅವರು ಆಶ್ರಮಕ್ಕೆ ಮರಳಿದ್ದಾಗ ಇಬ್ಬರು ಶವವಾಗಿ ಪತ್ತೆಯಾಗಿದ್ದಾರೆ. ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಬಡಾವಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.