ಸಂಕೇಶ್ವರ: ಪ್ರಧಾನಿ ನರೇಂದ್ರ ಮೋದಿ ಅವರು ಹರ್ ರ್ ತಿರಂಗಾ ಅಭಿಯಾನದಡಿ ದೇಶದ ಪ್ರತಿ ಸಾಮಾನ್ಯನಿಗೂ ಧ್ವಜಾರೋಹಣ ನೆರವೇರಿಸುವ ಅವಕಾಶ ಒದಗಿಸಿಕೊಟ್ಟು, ಸ್ವಾತಂತ್ರೋತ್ಸವದ ಅಮೃತ ಮಹೋತ್ಸವವನ್ನು ಅರ್ಥಪೂರ್ಣವಾಗಿಸಿದ್ದಾರೆ ಎಂದು ಮಾಜಿ ಸಂಸದ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪಟ್ಟಣದಲ್ಲಿ ಸೋಮವಾರ ಆಯೋಜಿಸಿದ್ದ ಸ್ವಾತಂತ್ರೋತ್ಸವದಲ್ಲಿ ಪಾಲ್ಗೊಂಡು ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.ದೇಶವಾಸಿಗಳಿಗೆ ಪ್ರಧಾನಿ ನೀಡಿರುವ ಈ ಸದಾವಕಾಶ ಸ್ಮರಣೀಯವಾಗಿದೆ.
ಇಷ್ಟು ದಿನ ಜನಪ್ರತಿನಿಧಿಗಳು, ಸಂ&ಸಂಸ್ಥೆಗಳ ಪದಾಧಿಕಾರಿಗಳಿಗಿದ್ದ ಈ ಅವಕಾಶ ಸಾಮಾನ್ಯನಿಗೂ ದೊರೆತಿರುವುದು 75 ವರ್ಷದ ಇತಿಹಾಸದಲ್ಲಿ ಇದೇ ಮೊದಲು. ಇಡೀ ವಿಶ್ವವೇ ಭಾರತದ ಈ ಅಮೃತ ಮಹೋತ್ಸವ ಕುತೂಹಲದಿಂದ ವೀಸಿದೆ. ಇಂತಹ ಅವಕಾಶ ನೀಡಿದ ಕೇಂದ್ರ ಸರ್ಕಾರದ ಕಾರ್ಯ ಶ್ಲಾನೀಯ ಎಂದರು.