More

    ಅಭಿವೃದ್ಧಿಗಾಗಿ ಅನುದಾನ ವ್ಯಯ


    ಶಾಸಕ ಕೆ.ಮಹದೇವ್ ಹೇಳಿಕೆ


    ಕಿತ್ತೂರು: ತಾಲೂಕಿನ ಅಭಿವೃದ್ಧಿಗಾಗಿ ಸರ್ಕಾರದಿಂದ ಅನುದಾನ ತರಲಾಗುತ್ತಿದ್ದು, ಗ್ರಾಮದ ಸಮಸ್ಯೆಯನ್ನು ಬಗೆಹರಿಸಲು ಹೆಚ್ಚು ಶ್ರಮಿಸಲಾಗುತ್ತಿದೆ ಎಂದು ಶಾಸಕ ಕೆ.ಮಹದೇವ್ ಹೇಳಿದರು.

    ಪಿರಿಯಾಪಟ್ಟಣ ತಾಲೂಕಿನ ಕಿತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

    ಸುಮಾರು 1.50 ಕೋಟಿ ರೂ.ವೆಚ್ಚದಲ್ಲಿ ಕಿತ್ತೂರಿನಿಂದ ಪೂಜಾರಯ್ಯನ ಕೊಪ್ಪಲುವರೆಗೆ ಕೆರೆ ಏರಿಯಾ ರಸ್ತೆ ,ಕಲ್ಯಾಣಿ ಗೌಡರ ಕೊಪ್ಪಲು, ಗುರುವಾಯನ ಕೊಪ್ಪಲು, ಪುಟ್ಟ ಸಿದ್ದಯ್ಯನ ಕೊಪ್ಪಲಿನ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ಅನುದಾನ ನೀಡಲಾಗಿದೆ ಎಂದರು.

    ಯುವ ಮುಖಂಡ ಗಗನ್ ಮಾತನಾಡಿದರು. ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಸಿ.ಎನ್.ರವಿ, ಜೆಡಿಎಸ್ ತಾಲೂಕು ಅಧ್ಯಕ್ಷ ಅಣ್ಣಯ್ಯ ಶೆಟ್ಟಿ, ತಾಪಂ ಸ್ಥಾಯಿ ಸಮಿತಿ ಸದಸ್ಯ ರಂಗಸ್ವಾಮಿ, ಮಾಜಿ ಸದಸ್ಯ ಮಲ್ಲಿಕಾರ್ಜುನ್, ಗ್ರಾಪಂ ಸದಸ್ಯ ದಿನೇಶ್, ಮುಖಂಡರಾದ ಪಟೇಲ್ ಕೀರ್ತಿ ,ಮುತ್ತು, ವಿದ್ಯಾಶಂಕರ್, ದೀಪು, ಪುಟ್ಟರಾಜು, ಅಶ್ವಥ್, ಕುಮಾರ್, ಗ್ರಾಪಂ ಮಾಜಿ ಸದಸ್ಯ ಮಹಾದೇವ ಮತ್ತಿತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts