ಯಾದಗಿರಿ: ಜೆಡಿಎಸ್ ಯುವ ಮುಖಂಡ ಶರಣಗೌಡ ಕಂದಕೂರ ಅವರ 39ನೇ ಜನ್ಮದಿನದ ನಿಮಿತ್ತ ಮಂಗಳವಾರ ಇಲ್ಲಿನ ಆತ್ಮಲಿಂಗೇಶ್ವರ ದೇವಸ್ಥಾನದಲ್ಲಿ ಕಂದಕೂರ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಕಂದಕೂರ ಅಭಿಮಾನಿಗಳು ಶರಣಗೌಡ ಅವರು ಕೇವಲ ರಾಜಕೀಯ ಕ್ಷೇತ್ರಕ್ಕೆ ಸೀಮಿತಗೊಂಡಿಲ್ಲ. ಎಲ್ಲ ವರ್ಗದ ನಾಯಕರಾಗಿರುವ ಅವರು, ಗುರುಮಠಕಲ್ ಕ್ಷೇತ್ರದ ಯುವಕರ ಕಣ್ಮಣಿಯಾಗಿದ್ದಾರೆ. ಸಮಾಜದ ಕಟ್ಟಕಡೆಯ ವ್ಯಕ್ತಿಯ ಹಿತ ಕಾಪಾಡುವ ಸರಳತೆ ಮೈಗೂಡಿಸಿಕೊಂಡಿರುವ ಕಂದಕೂರ ಅವರ ಭವಿಷ್ಯ ಜೀವನ ಉಜ್ವಲವಾಗಿರಲೆಂದು ವಿಶೇಷ ಪೂಜೆ ಸಲ್ಲಿಸಲಾಗಿದೆ ಎಂದರು.
ಕಂದಕೂರ ಅವರು, ಈಗಾಗಲೇ ಅಭಿಮಾನಿಗಳಿಗೆ ಹಾಗೂ ಪಕ್ಷದ ಯುವ ಕಾರ್ಯಕರ್ತರಿಗೆ ತಮ್ಮ ಜನ್ಮದಿನಾಚರಣೆಯನ್ನು ಅದ್ದೂರಿಯಾಗಿ ಆಚರಣೆ ಮಾಡುವುದು ಬೇಡ ಎಂದು ಸೂಚನೆ ನೀಡಿದ ಕಾರಣ ಅತ್ಯಂತ ಸರಳ ರೀತಿಯಲ್ಲಿ ಆಚರಣೆ ಮಾಡಲಾಗಿದ್ದು, ನಾವು ಅವರ ಮನಸ್ಸು ನೋಯಿಸುವ ಕೆಲಸ ಎಂದಿಗೂ ಮಾಡುವುದಿಲ್ಲ ಎಂದು ತಿಳಿಸಿದರು.
ಗುರುಮಠಕಲ್ ತಾಪಂ ಅಧ್ಯಕ್ಷ ಈಶ್ವರ ನಾಯಕ, ಜೆಡಿಎಸ್ ಯುವ ಮುಖಂಡ ಶಿವಕುಮಾರ ಚವ್ಹಾಣ ಯಂಪಾಡ, ಶಾಂತಪ್ಪ ಜಾಧವ್, ಕಿಷನ್ ರಾಠೋಡ ಆಶನಾಳ, ಮೋಹನ್ ರಾಠೋಡ, ವಾಚು ಅಲ್ಲಿಪುರ, ಗೋಪಾಲ್ ಪವಾರ್ ಖಾನಳ್ಳಿ, ಶಂಕರ ರಾಠೋಡ ಜಿನಿಕೇರಿ, ವಿಜಯ ಜಾಧವ, ವಿಕ್ರಮ ರಾಠೋಡ ಬಸವಂತಪುರ, ಗುರು ಅಲ್ಲಿಪುರ, ಬಸವರಾಜ ಕಾರಭಾರಿ ಯಂಪಾಡ, ಅಜರ್ುನ ಪವಾರ್, ಧರ್ಮರಾಜ್ ಅಂಬ್ರೇಷ್ ರಾಠೋಡ ಸೇರಿದಂತೆ ಇನ್ನಿತರ ಶರಣಗೌಡರ ಅಭಿಮಾನಿ ಬಳಗದವರು ಉಪಸ್ಥಿತರಿದ್ದರು.