ಚಿತ್ರದುರ್ಗ: ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸೇವೆ ಕಾಯಂ ಗೊಳಿಸುವಂತೆ ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಶುಕ್ರವಾರ ಡಿಸಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.
ತರಗತಿಗಳನ್ನು ಬಹಿಷ್ಕರಿಸಿ ರಾಜ್ಯಾದ್ಯಂತ ಅತಿಥಿ ಉಪನ್ಯಾಸಕರು ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿರುವುದರಿಂದಾಗಿ, ಪಾಠ-ಪ್ರವಚನಗಳಿಗೆ ತೊಂದರೆಯಾಗಿದೆ. ಆದ್ದರಿಂದ ರಾಜ್ಯ ಸರ್ಕಾರ ಕೂಡಲೇ ಬೇಡಿಕೆಯನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.
ವೇದಿಕೆ ಜಿಲ್ಲಾ ಸಂಚಾಲಕ ಎಸ್.ಕೆ.ಸಿದ್ದೇಶ್, ಎಸ್.ಸುದರ್ಶನ ನಾಯ್ಕ, ಕನಕರಾಜ್, ಚೈತ್ರಾ, ಚಂದನಾ, ಸಿ.ಚಿತ್ರಸ್ವಾಮಿ, ರಾಧಾ, ಸುಪ್ರೀಯಾ, ನಾಗೇಂದ್ರ, ತಿಪ್ಪೇಶ್, ಅಜಯ್, ಅಜಯ್ಕುಮಾರ್, ಮಂಜು, ತರುಣ್, ಸುದೀಪ್, ಪ್ರೇಮಾನಂದ ಇತರರು ಇದ್ದರು.