ಹೊಸನಗರ: ಮೂಡುಗೊಪ್ಪದಲ್ಲಿ ಶನಿವಾರ ಬಿಸಿಲು ಮತ್ತು ಗಾಳಿಯ ತೀವ್ರತೆಗೆ ಬೆಂಕಿ ತಗುಲಿ 400ಕ್ಕೂ ಹೆಚ್ಚು ಅಡಕೆ ಮರಗಳಿಗೆ ಹಾನಿಯಾಗಿದೆ. ಮೂಡುಗೊಪ್ಪ ಗ್ರಾಮದ ರಮಣಪ್ರಸಾದ ಮತ್ತು ಬಾಲಚಂದ್ರ ಅವರ ಜಮೀನಿನಲ್ಲಿ ಆಕಸ್ಮಿಕ ಬೆಂಕಿ ಕಂಡುಬಂದಿದ್ದು ಘಟನೆ ತಿಳಿಯುತ್ತಿದ್ದಂತೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸಿದರು.