More

    ಅಗ್ನಿಪಥ್ ನೇಮಕಾತಿಗೆ ಸಿದ್ಧತೆ


    ವಿಜಯವಾಣಿ ವಿಶೇಷ ಹಾವೇರಿ
    ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಸೆ. 1ರಿಂದ 20ರವರೆಗೆ ಆಯೋಜಿಸಿರುವ ಅಗ್ನಿಪಥ್ ನೇಮಕಾತಿ ರ್ಯಾಲಿಗೆ ಸಿದ್ಧತೆಗಳು ಆರಂಭಗೊಂಡಿವೆ.
    ನೇಮಕಾತಿ ನಡೆಯುವ ಕ್ರೀಡಾಂಗಣದಲ್ಲಿ ನೇಮಕಾತಿಯ ವಿವಿಧ ಪರೀಕ್ಷೆಗಳನ್ನು ನಡೆಸಲು ಹಾಗೂ ಸೇನಾ ಅಧಿಕಾರಿಗಳು ಕುಳಿತುಕೊಳ್ಳಲು ತಾತ್ಕಾಲಿಕವಾಗಿ ಟೆಂಟ್ ನಿರ್ವಿುಸುವ ಕಾರ್ಯ ಭರದಿಂದ ಸಾಗಿದೆ.
    ಅಗ್ನಿಪಥ್ ನೇಮಕಾತಿಗೆ ಜಿಲ್ಲಾಡಳಿತವು ಸಕಲ ಸಿದ್ಧತೆಗಳನ್ನು ಶನಿವಾರದಿಂದ ಕೈಗೊಳ್ಳುತ್ತಿದೆ. ಈಗಾಗಲೇ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಜಿಪಂ ಸಿಇಒ ಮಹಮ್ಮದ್ ರೋಷನ್ ಅವರೊಂದಿಗೆ ಸೇನಾ ನೇಮಕಾತಿ ನಿರ್ದೇಶಕ ಕರ್ನಲ್ ಅನುಜ್ ಗುಪ್ತಾ ಅವರು ನೇಮಕಾತಿ ಸಿದ್ಧತೆಗಳ ಕುರಿತು ಚರ್ಚೆ ನಡೆಸಿದ್ದಾರೆ.
    ಅಗ್ನಿವೀರರ ನೇಮಕಾತಿ ರ್ಯಾಲಿಗೆ ಕ್ರೀಡಾಂಗಣದಲ್ಲಿ ಮಾರ್ಷಲಿಟಿ, ಅಸೆಂಬಲ್, ರನ್ನಿಂಗ್, ಔಟ್​ಗೋಯಿಂಗ್, ಫಿಜಿಕಲ್ ಫಿಟ್ನೆಸ್, ಮೆಡಿಕಲ್ ಏರಿಯಾಗಳ ಮಾರ್ಕಿಂಗ್ ವ್ಯವಸ್ಥೆ, ಬ್ಯಾರಿಕೇಡ್, ಟೆಂಟ್, ಪೊಲೀಸ್ ಬಂದೋಬಸ್ತ್, ಆಂಬುಲೆನ್ಸ್, ವೈದ್ಯಕೀಯ, ವಿದ್ಯುತ್ ವ್ಯವಸ್ಥೆ, ಶೌಚಗೃಹ, ಕುಡಿಯುವ ನೀರಿನ ವ್ಯವಸ್ಥೆ ಕೈಗೊಳ್ಳಲಾಗುತ್ತಿದೆ. ಮಳೆಗಾಲವಾಗಿದ್ದರಿಂದ ತಗಡಿನ ಹೊದಿಕೆಯ ಟೆಂಟ್​ಗಳನ್ನು ನಿರ್ವಿುಸಲಾಗುತ್ತಿದೆ.
    ನೇಮಕಾತಿಯಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ರಿಯಾಯಿತಿ ದರದಲ್ಲಿ ವಸತಿ ಸೌಕರ್ಯ, ಮಾಹಿತಿ ನೀಡಲು ಹೆಲ್ಪ್​ಡೆಸ್ಕ್ ಹಾಗೂ ಸಾರಿಗೆ ಸೌಕರ್ಯಕ್ಕಾಗಿ ಸಂರ್ಪಸಲು ಉಸ್ತುವಾರಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ವಸತಿ ಸೌಕರ್ಯಕ್ಕಾಗಿ ಸಮಾಜಕಲ್ಯಾಣ ಇಲಾಖೆ ಉಪನಿರ್ದೇಶಕ (ಮೊ. 9741746273), ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ (ಮೊ. 9945257844), ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ (ಮೊ. 9538706363), ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ (ಮೊ. 9900873399), ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಇಲಾಖೆ ಅಧಿಕಾರಿ (ಮೊ. 9632465161), ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು (ಮೊ. 8867412236), ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು(ಮೊ. 9902745227), ಡಾ. ಬಿ.ಆರ್. ಅಂಬೇಡ್ಕರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ(ಮೊ. 9606721298), ನಗರಸಭೆ ಪರಿಸರ ಅಭಿಯಂತರ(ಮೊ. 9035451219), ನಗರಸಭೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ (ಮೊ. 9535927093), ತಹಸೀಲ್ದಾರ್(ಮೊ. 9731569555) ಹಾಗೂ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ ಸಹಾಯಕ ನಿರ್ದೇಶಕ (ಮೊ. 8310616578)ರನ್ನು ನೇಮಿಸಲಾಗಿದೆ.
    ಹೆಲ್ಪ್​ಡೆಸ್ಕ್ ಸ್ಥಾಪನೆ: ಹಾವೇರಿ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಹೆಲ್ಪ್​ಡೆಸ್ಕ್ ಸ್ಥಾಪಿಸಿ ಮೂರು ಪಾಳೆಯಲ್ಲಿ ಸಿಬ್ಬಂದಿ ನಿಯೋಜಿಸಲಾಗಿದೆ. ಘಟಕದ ಸಹಾಯಕ ನಿರ್ದೇಶಕ ಆರ್.ಎಸ್. ಮಾಸೂರ (ಮೊ. 7019790682) ಬೆಳಗ್ಗೆ 6ಗಂಟೆಯಿಂದ ಮಧ್ಯಾಹ್ನ 2ಗಂಟೆವರೆಗೆ, ಎಂ.ಸಿ. ಸ್ವಾದಿ (ಮೊ. 9743052044) ಮಧ್ಯಾಹ್ನ 2ಗಂಟೆಯಿಂದ ರಾತ್ರಿ 10ರವರೆಗೆ ಹಾಗೂ ಮಹದೇವಪ್ಪ ಚುಳಕಿ (ಮೊ. 6362209657) ರಾತ್ರಿ 10ಗಂಟೆಯಿಂದ ಬೆಳಗ್ಗೆ 6ರವರೆಗೆ ಕಾರ್ಯನಿರ್ವಹಿಸಲಿದ್ದಾರೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾವೇರಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ವಿ.ಎಸ್. ಜಗದೀಶ ತಿಳಿಸಿದ್ದಾರೆ.


    ಹೆಚ್ಚುವರಿ ಬಸ್ ಸೇವೆ: ಅಗ್ನಿವೀರರ ನೇಮಕಾತಿ ಹಿನ್ನೆಲೆಯಲ್ಲಿ ಜಿಲ್ಲೆಯ ಹಾವೇರಿ, ಹಿರೇಕೆರೂರ, ರಾಣೆಬೆನ್ನೂರ, ಹಾನಗಲ್ಲ, ಬ್ಯಾಡಗಿ ಹಾಗೂ ಸವಣೂರ ಘಟಕಗಳಿಂದ ಹೆಚ್ಚುವರಿ ಬಸ್ ಕಾರ್ಯಾಚರಣೆಗೊಳಿಸಲಾಗುವುದು. ಹಾವೇರಿ ವಿಭಾಗದಲ್ಲಿ ಜನರ ಓಡಾಟ ಹೆಚ್ಚಾಗುವುದರಿಂದ ಆಯಾ ಘಟಕಗಳಿಂದ ದಾವಣಗೆರೆ, ಹುಬ್ಬಳ್ಳಿ, ಶಿರಸಿ, ಹೊಸಪೇಟೆ ಮುಂತಾದ ಸ್ಥಳಗಳ ಕಡೆಗೆ ಬಸ್ ನಿಲ್ದಾಣದಲ್ಲಿನ ಜನಸಂದಣಿಗೆ ಅನುಗುಣವಾಗಿ ಹೆಚ್ಚುವರಿ ಬಸ್ ಕಾರ್ಯಾಚರಣೆ ಗೊಳಿಸುವಂತೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts