ಹುಬ್ಬಳ್ಳಿ: ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಆಯ್ಕೆಯಾದ ಜಿಲ್ಲೆಯ 36 ಅಂಗವಿಕಲರಿಗೆ ಇಲ್ಲಿನ ಮಿನಿ ವಿಧಾನಸೌಧ ಆವರಣದಲ್ಲಿ ಬುಧವಾರ ಜಿಲ್ಲಾ ಪಂಚಾಯಿತಿ ಸಿಇಒ ಸುಶೀಲಾ ಬಿ. ಅವರು ತ್ರಿಚಕ್ರ ವಾಹನಗಳನ್ನು ವಿತರಿಸಿದರು.
ಬಳಿಕ ಮಾತನಾಡಿ, 2018-2019ನೇ ಸಾಲಿಗೆ 38 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿತ್ತು. ಅದರಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಪಟ್ಟಿಯಲ್ಲಿ ಜ್ಯೇಷ್ಠತೆ ಹೊಂದಿರುವ ಉಳಿದ ಇಬ್ಬರನ್ನು ಆಯ್ಕೆ ಮಾಡಿ, ತ್ರಿಚಕ್ರ ವಾಹನ ವಿತರಿಸಲಾಗುವುದು. ಎಲ್ಲ ಫಲಾನುಭವಿಗಳ ಬಳಿ ವಾಹನ ಚಾಲನಾ ಕಲಿಕಾ ಪರವಾನಗಿ (ಎಲ್ಎಲ್ಆರ್) ಪತ್ರಗಳು ಇವೆ. ವಾಹನ ನೋಂದಣಿ ಸಮಯದಲ್ಲಿ ವಾಹನ ಚಾಲನಾ ಪತ್ರ(ಡಿಎಲ್)ಗಳನ್ನು ನೀಡಲಾಗುವುದು ಎಂದರು.
ಹಿರಿಯ ನಾಗರಿಕರು ಹಾಗೂ ಅಂಗವಿಕಲರ ಕಲ್ಯಾಣಾಧಿಕಾರಿ ಡಿ.ಎನ್. ಮೂಲಿಮನಿ, ತಾಪಂ ಇಒ ಗಂಗಾಧರ ಕಂದಕೋರ, ಅಣ್ಣಪ್ಪ ಅಂಕಲಗಿ, ಮತ್ತಿತರರು ಇದ್ದರು.