More

    ದೆಹಲಿ ಗಲಭೆಯಲ್ಲಿ ಝಾಕೀರ್​ ನಾಯ್ಕ್​ ಕೈವಾಡ…? ಭಾರತಕ್ಕೆ ಒಪ್ಪಿಸಲು ಮಲೇಷ್ಯಾಗೆ ಒತ್ತಡ

    ನವದೆಹಲಿ: ಹಲವು ಪ್ರಕರಣಗಳಲ್ಲಿ ಆರೋಪಿಯಾಗಿರುವ ಭಾರತದಿಂದ ನಾಪತ್ತೆಯಾಗಿ ಮಲೇಷ್ಯಾದಲ್ಲಿ ತಲೆಮರೆಸಿಕೊಂಡಿರುವ ಇಸ್ಲಾಮಿಕ್​ ಧರ್ಮ ಪ್ರಚಾರಕ ಝಾಕೀರ್​ ನಾಯ್ಕ್​ ಕೊರಳಿಗೆ ಈಗ ಮತ್ತೊಂದು ಉರುಳು ಸುತ್ತಿಕೊಂಡಿದೆ.

    ದೆಹಲಿಯಲ್ಲಿ ಕಳೆದ ಫೆಬ್ರವರಿಯಲ್ಲಿ ನಡೆದ ಗಲಭೆ ಆರೋಪಿಯಾಗಿರುವ ಖಾಲೀದ್​ ಸೈಫಿ ವಿದೇಶದಲ್ಲಿ ಝಾಕೀರ್​ ನಾಯ್ಕ್​ನನ್ನು ಭೇಟಿಯಾಗಿದ್ದ. ಆತನ ಅಜೆಂಡಾವನ್ನು ಭಾರತದಲ್ಲಿ ಪಸರಿಸುವುದಾಗಿ ಒಪ್ಪಿಕೊಂಡಿದ್ದ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.

    ಇದನ್ನೂ ಓದಿ; ರಾಷ್ಟ್ರೀಯ ಭದ್ರತಾ ಮಂಡಳಿ ನೀಡಿದೆ ಎಚ್ಚರಿಕೆ …! ಈ ಚೀನಿ ಆ್ಯಪ್​ಗಳಿದ್ದರೆ ಅಪಾಯ

    ಆದರೆ, ಈ ಆರೋಪವನ್ನು ಝಾಕೀರ್​ ನಾಯ್ಕ್​ ನಿರಾಕರಿಸಿದ್ದಾನೆ. ತಾನು ಖಾಲೀದ್​ ಸೈಫಿ ಎನ್ನುವ ಯಾರನ್ನೂ ಭೇಟಿಯಾಗಿಲ್ಲ ಎಂದು ಆತ ಹೇಳಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.

    ಈ ಬೆಳವಣಿಗೆಯಿಂದಾಗಿ ಇಸ್ಲಾಮಿಕ್​ ಧರ್ಮ ಪ್ರಚಾರಕನ ಕುರಿತಾದ ಧಾರ್ಮಿಕ ಹಾಗೂ ರಾಜಕೀಯ ಚರ್ಚೆಗಳು ಮತ್ತೆ ಬಿರುಸು ಪಡೆದುಕೊಂಡಂತಾಗಿದೆ. ಮಲೇಷ್ಯಾದಲ್ಲಿ ಆಶ್ರಯ ಪಡೆದುಕೊಂಡಿರುವ ಈತನನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಮೇ 14 ರಂದು ಪೊಲೀಸರು ಮನವಿ ಸಲ್ಲಿಸಿದ್ದಾರೆ.

    ಇದನ್ನೂ ಓದಿ; ಒಂದಿಡೀ ದಿನವಾದರೂ ಬೇಯಲಿಲ್ಲ ಕರೊನಾಪೀಡಿತನ ಶವ…! 

    ಈತನ ವಿರುದ್ಧ ಭಾರತದಲ್ಲಿ ಅಕ್ರಮ ಹಣ ವರ್ಗಾವಣೆ, ಕೋಮುದ್ವೇಷ ಕೆರಳಿಸುವ ಭಾಷಣ, ಅಕ್ರಮ ಆಸ್ತಿ ಖರೀದಿ ಆರೋಪಗಳಿವೆ. ಜತೆಗೆ, 2016ರಲ್ಲಿ ಬಾಂಗ್ಲಾ ರಾಜಧಾನಿ ಢಾಕಾದಲ್ಲಿ ನಡೆದ ಬಾಂಬ್​ ಸ್ಫೋಟಕ್ಕೆ ಈತನ ಭಾಷಣವೇ ಪ್ರಚೋದನೆ ಆರೋಪಿ ಹೇಳಿಕೊಂಡಿದ್ದ.

    https://www.vijayavani.net/bees-are-busier-in-lockdown-produced-more-honey-as-pollution-plummets/

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts