ಬೆಂಗಳೂರು: ‘ರಾಜಕುಮಾರ’ ನಂತರ ಪುನೀತ್ ಮತ್ತು ಸಂತೋಷ್ ಆನಂದರಾಮ್ ಕಾಂಬಿನೇಶನ್ನಲ್ಲಿ ಮೂಡಿ ಬರುತ್ತಿರುವ ‘ಯುವರತ್ನ’ ಸಿನಿಮಾ ಮೇಲೆ ಅಭಿಮಾನಿಗಳಿಗೆ ಭಾರೀ ನಿರೀಕ್ಷೆ ಇದೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಸದ್ಯ ಹಾಡೊಂದನ್ನು ಶೂಟ್ ಮಾಡಲು ಈ ವಾರದಲ್ಲಿ ಆಸ್ಟ್ರಿಯಾಗೆ ಹೋಗಲಿದೆ.
ಆಸ್ಟ್ರಿಯಾ, ಸ್ಲೋವೆನಿಯಾದ ಸುಂದರ ತಾಣವನ್ನು ಚಿತ್ರೀಕರಣಕ್ಕಾಗಿ ಆಯ್ಕೆ ಮಾಡಿಕೊಂಡಿರುವ ಚಿತ್ರತಂಡ, ಜೊತೆಗೆ ಇಲ್ಲಿ ಕರೋನಾ ವೈರಸ್ನ ಭಯ ಇಲ್ಲ ಎಂಬುದನ್ನು ಸಹ ಕನ್ಪಮ್ರ್ ಮಾಡಿಕೊಂಡಿದೆಯಂತೆ.
‘ಇದು ಸಿಕ್ಕಾಪಟ್ಟೆ ಎನರ್ಜಿ ಇರುವ ಡ್ಯುಯೆಟ್ ಹಾಡು. ಹಾಗಾಗಿ ನಮಗೆ ಬೆಟ್ಟ, ಗುಡ್ಡಗಳಿರುವ ಆಕರ್ಷಕವಾದ ಸುಂದರ ಲೊಕೇಶನ್ಗಳ ಅವಶ್ಯಕತೆ ಇತ್ತು. ಹಾಗಾಗಿ ಆಸ್ಟ್ರಿಯಾ, ಸ್ಲೋವಿನೇಯಾ ದೇಶಗಳನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಗೌಸ್ ಪೀರ್ ಬರೆದಿರುವ ಈ ಹಾಡಿಗೆ ಎಸ್.ಎಸ್ ತಮನ್ ಸಂಗೀತ ಸಂಯೋಜಿಸಿದ್ದಾರೆ. ಪುನೀತ್ ಮತ್ತು ಸಯ್ಯೇಶಾ ಸೈಗಲ್ ಈ ಹಾಡಿನಲ್ಲಿ ಬಹಳ ಸುಂದರವಾಗಿ ಕಾಣಿಸಿಕೊಳ್ಳಲಿದ್ದಾರೆ’ಎಂದು ಮಾಹಿತಿ ನೀಡುತ್ತಾರೆ ನಿರ್ದೇಶಕ ಸಂತೋಷ್ ಆನಂದರಾಮ್ ಡ್ಯುಯೆಟ್ ಹಾಡಿನ ಚಿತ್ರೀಕರಣ ಮುಗಿಸಿ ವಾಪಾಸ್ ಬಂದ ಮೇಲೆ ಪುನೀತ್ ಅವರ ಇಂಟ್ರೊಡಕ್ಷನ್ ಸಾಂಗ್ ಚಿತ್ರೀಕರಣ ಮಾಡಲಾಗುವುದು ಎಂದು ಅವರು ಹೇಳುತ್ತಾರೆ.