More

    ತೆಲುಗಿನಲ್ಲಿ ಪುನೀತ್​ ರಾಜ್​ಕುಮಾರ್​ಗೆ ಸಿಕ್ತು ಅದ್ಧೂರಿ ಸ್ವಾಗತ; ನಿರ್ದೇಶಕ ಪುರಿ ಜಗನ್ನಾಥ್​ ಏನಂದ್ರು ನೋಡಿ!

    ಬೆಂಗಳೂರು: ಪವರ್​ಸ್ಟಾರ್ ಪುನೀತ್​ ರಾಜ್​ಕುಮಾರ್ ಕನ್ನಡ ಹೊರತುಪಡಿಸಿ ಬೇರೆ ಭಾಷೆಗಳಲ್ಲಿ ಕಾಣಿಸಿಕೊಂಡಿಲ್ಲ. ಆದರೆ, ಪುನೀತ್​ ಬಗ್ಗೆ ಇಡೀ ಸೌತ್​ ಸಿನಿಮಾ ಇಂಡಸ್ಟ್ರಿಗೆ ಗೊತ್ತು. ದಕ್ಷಿಣದ ತೆಲುಗು ಮತ್ತು ತಮಿಳಿನ ಮಂದಿ ಪುನೀತ್ ಅವರ ಡಾನ್ಸ್ ನೋಡಿಯೇ ಫಿದಾ ಆದವರಿದ್ದಾರೆ. ಇದೀಗ ಸಿನಿಮಾವನ್ನೂ ಕಣ್ತುಂಬಿಕೊಳ್ಳುವ ಸಮಯ ಹತ್ತಿರ ಬಂದಿದೆ.

    ಇದನ್ನೂ ಓದಿ: ಮಾಲ್ಡೀವ್ಸ್​ನಲ್ಲಿ ಪತಿ ಜತೆಗೆ ಸಮಂತಾ ಹಾಲಿಡೇ …

    ಅಂದರೆ, ಸಂತೋಷ್​ ಆನಂದ್​ ರಾಮ್​ ನಿರ್ದೇಶನ ಮಾಡಿರುವ ಯುವರತ್ನ ಸಿನಿಮಾ ಕನ್ನಡದ ಜತೆಗೆ ತೆಲುಗಿನಲ್ಲೂ ತೆರೆಕಾಣಲಿದೆ. ಈ ಹಿಂದೆ ಇಂಥದ್ದೊಂದು ಸುದ್ದಿ ಹರಿದಾಡಿತ್ತಾದರೂ, ಅಧಿಕೃತ ಘೋಷಣೆ ಆಗಿರಲಿಲ್ಲ. ಇದೀಗ ಸ್ವತಃ ಚಿತ್ರತಂಡವೇ ಆ ಖುಷಿಯ ವಿಚಾರವನ್ನು ಹೇಳಿಕೊಂಡಿದೆ.

    ಸೋಷಿಯಲ್​ ಮೀಡಿಯಾದಲ್ಲಿ ಈ ಬಗ್ಗೆ ತೆಲುಗಿನ ಪೋಸ್ಟರ್ ಬಿಡುಗಡೆ ಮಾಡಿಕೊಂಡಿರುವ ತಂಡ, ಡಿಸೆಂಬರ್ 2ಕ್ಕೆ ಹಾಡನ್ನೂ ಬಿಡುಗಡೆ ಮಾಡಿಕೊಳ್ಳಲಿದೆ. ಈ ನಡುವೆ ಯುವರತ್ನ ಸಿನಿಮಾ ತೆಲುಗಿನಲ್ಲಿ ತೆರೆಕಾಣಲಿದೆ ಎಂಬ ಸುದ್ದಿ ಹೊರಬರುತ್ತಿದ್ದಂತೆ, ಟಾಲಿವುಡ್​ನ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಪುನೀತ್​ ಅವರನ್ನು ಸ್ವಾಗತಿಸಿದ್ದಾರೆ.

    ಇದನ್ನೂ ಓದಿ: ಕಮಲದತ್ತ ಮುಖ ಮಾಡಿದ ಕಾಂಗ್ರೆಸ್​ ಸ್ಟಾರ್​ ಪ್ರಚಾರಕಿ ನಟಿ- ನಾಳೆ ಮುಹೂರ್ತ ಫಿಕ್ಸ್​?

    ‘ಕನ್ನಡ ಕಂಠೀರವ ಡಾ. ರಾಜಕುಮಾರ್ ಅವರ ಪುತ್ರ, ನನ್ನ ಹೀರೊ ಪುನೀತ್​ ರಾಜಕುಮಾರ್​ ಟಾಲಿವುಡ್​ಗೆ ನಿಮಗೆ ಸ್ವಾಗತ. ಲವ್​ ಯೂ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ. ಕೆಜಿಎಫ್​ ಸಿನಿಮಾ ನಿರ್ಮಾಣ ಮಾಡಿದ ಹೊಂಬಾಳೆ ಯುವರತ್ನ ಸಿನಿಮಾ ನಿರ್ಮಿಸಿದೆ’ ಎಂದು ಬರೆದುಕೊಂಡಿದ್ದಾರೆ.

    PHOTOS| ಬಿಕಿನಿ ಅವತಾರದಲ್ಲಿ ಶಾನ್ವಿ ಮಿಂಚಿಂಗ್​..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts