More

    ಸವಾಲು ಹಾಕಿ ಈಜಲು ಹೋದವ ವಾಪಸ್​ ಬರಲೇ ಇಲ್ಲ; ಗೆಳೆಯರೊಂದಿಗೆ ಪೈಪೋಟಿಗಿಳಿದು ಪ್ರಾಣ ಕಳೆದುಕೊಂಡ ಯುವಕ

    ಚಿಕ್ಕಬಳ್ಳಾಪುರ: ನೀರಿನಲ್ಲಿ ಈಜು-ಮೋಜು ಪ್ರಾಣಕ್ಕೆ ಕಂಟಕವಾದ ಅನೇಕ ಪ್ರಕರಣಗಳಿವೆ. ಅಂಥದ್ದೇ ಮತ್ತೊಂದು ಪ್ರಕರಣ ಇಂದು ವರದಿಯಾಗಿದ್ದು, ಸವಾಲು ಹಾಕಿ ಈಜಲು ಹೋದವ ವಾಪಸ್ ಬರಲೇ ಇಲ್ಲ.

    ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕು ಹಂಪಸಂದ್ರ ಕೆರೆಯಲ್ಲಿ ಈ ದುರಂತ ಸಂಭವಿಸಿದೆ. ಸಂತೋಷ್ ಎಂಬ 24 ವರ್ಷದ ಯುವಕ ಇದರಲ್ಲಿ ಮೃತಪಟ್ಟಿದ್ದಾನೆ. ಗೆಳೆಯರಾದ ವಿಜಯ್ ಹಾಗೂ ಪವನ್ ಜೊತೆ ಈತ ಈಜಲು ಹೋಗಿದ್ದಾಗ ಅವಘಡ ಉಂಟಾಗಿದೆ.

    ಇದನ್ನೂ ಓದಿ: ತಾಯಿಯ ತೆವಲಿಗೆ ಬಲಿಯಾದ ಮಗ; ಅಕ್ರಮ ಸಂಬಂಧಕ್ಕೆ ಅಡ್ಡಿಯಾದವನನ್ನು ಪ್ರಿಯಕರನಿಂದ ಕೊಲ್ಲಿಸಿದ ಅಮ್ಮ!

    ಸ್ನೇಹಿತರೊಂದಿಗೆ ಸವಾಲು ಹಾಕಿದ್ದ ಸಂತೋಷ್​, ಮಳೆ ಬಂದು ತುಂಬಿದ್ದ ಕೆರೆಯಲ್ಲಿ ಈಜಲು ಧುಮುಕಿದ್ದಾನೆ. ಪೈಪೋಟಿಗೆ ಬಿದ್ದು ಈಜುತ್ತಿದ್ದಾಗ ಸಂತೋಷ್​ ಮುಳುಗಿ ಮೃತಪಟ್ಟಿದ್ದಾನೆ. ಗುಡಿಬಂಡೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಆಗ್ನಿಶಾಮಕ ದಳದ ಸಿಬ್ಬಂದಿ ಮೃತದೇಹಕ್ಕಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

    ‘ಸಮಂತಾಗೆ ಅಫೇರ್ಸ್​ ಇತ್ತು, ಮಕ್ಕಳನ್ನು ಬಯಸಿರಲಿಲ್ಲ, ಗರ್ಭಪಾತ ಆಗಿತ್ತು..’ ಎಂಬೆಲ್ಲ ಆರೋಪಗಳಿಗೆ ಅವರಿಂದಲೇ ಬಂತು ದಿಟ್ಟ ಉತ್ತರ

    ಮಾರಣಾಂತಿಕವಾದ ಆಟ; ನಾಲೆ​ಗೆ ಬಿದ್ದ ನಾಲ್ವರಲ್ಲಿ ಇಬ್ಬರು ಮಕ್ಕಳ ಸಾವು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts