More

    ಮದುವೆಯ ದಿನ ಮೊಬೈಲ್​ ಸ್ವಿಚ್​ ಆಫ್ ಮಾಡಿ ಬಚ್ಚಿಟ್ಟುಕೊಂಡ ವರ​: ನಂತರ ನಡೆದಿದ್ದು ಘೋರ ದುರಂತ

    ತಿರುವನಂತಪುರ: ಮದುವೆಯ ದಿನವೇ ವರನೊಬ್ಬ ಫೋನ್​ ಸ್ವಿಚ್​​ ಮಾಡಿಕೊಂಡು ಬಚ್ಚಿಟ್ಟುಕೊಂಡಿದ್ದಕ್ಕೆ ಮನನೊಂದು 23 ವರ್ಷದ ಯುವತಿ ಸಾವಿಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಕೇರಳದಲ್ಲಿ ನಡೆದಿದೆ.

    ಮೃತ ಯುವತಿಯನ್ನು ಧನ್ಯಾ ಎಂದು ಗುರುತಿಸಲಾಗಿದೆ. ಈಕೆ ಕೊಲ್ಲಂನ ವಟ್ಟಪಾಡ್​ನಲ್ಲಿರುವ ಮಧು ಭವನ್​ ನಿವಾಸಿ. ಶನಿವಾರ ಬೆಳಗ್ಗೆ 8 ಗಂಟೆಗೆ ತನ್ನ ಬೆಡ್​ರೂಮ್​ನ ಬಾತ್​ರೂಮ್​ನಲ್ಲಿ ಶಾಲೂವಿನಿಂದ ನೇಣು ಬಿಗಿದುಕೊಂಡು ಮೃತಪಟ್ಟಿರುವ ಸ್ಥಿತಿಯಲ್ಲಿ ಧನ್ಯಾಳ ಮೃತದೇಹ ಪತ್ತೆಯಾಗಿದೆ.

    ಇದನ್ನೂ ಓದಿ: ದೇಶಾದ್ಯಂತ ಬಿರುಬಿಸಿಲಿನ ಝುಳ ಹೆಚ್ಚಳ: ವಿದ್ಯುತ್ ಸರಬರಾಜಿಗೆ ಹೆಚ್ಚಿದ ಬೇಡಿಕೆ, ಕಾಡುತ್ತಿರುವ ಅಭಾವದ ಆತಂಕ

    ಮೃತ ಧನ್ಯಾ, ಕೊಲ್ಲಂನ ಅಂಚಲದ ಅತಿಶಯಮಂಗಲಂ ನಿವಾಸಿ ಅಖಿಲ್​ ಎಂಬಾತನನ್ನು ಕಳೆದು ಒಂದು ವರ್ಷಕ್ಕೂ ಅಧಿಕ ಸಮಯದಿಂದ ಪ್ರೀತಿಸುತ್ತಿದ್ದಳು. ಫೆ. 15ರಂದು ಮನೆಯಿಂದ ಧನ್ಯಾ ನಾಪತ್ತೆಯಾಗಿದ್ದಳು. ಇದರ ಆಧಾರದ ಮೇಲೆ ಆಕೆಯ ಕುಟುಂಬಸ್ಥರು ಸ್ಥಳೀಯ ಪೊಲೀಸ್​ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.

    ತನಿಖೆ ಆರಂಭಿಸಿದ ಪೊಲೀಸರಿಗೆ ಧನ್ಯಾ, ಅಖಿಲ್​ ಜೊತೆ ಇರುವುದು ತಿಳಿಯಿತು. ಬಳಿಕ ಧನ್ಯಾಳ ಕುಟುಂಬಸ್ಥರ ಮುಂದೆ ಆಕೆಯನ್ನು ರಿಜಿಸ್ಟರ್​ ಮದುವೆ ಆಗುವುದಾಗಿ ಅಖಿಲ್​ ಆಣೆ ಮಾಡಿದ್ದ. ನಂತರ ಮದುವೆಯ ದಿನಾಂಕವು ನಿಗದಿಯಾಯಿತು. ಅದರಂತೆ ಮದುವೆಯ ದಿನ ಧನ್ಯಾ ಮತ್ತು ಆಕೆಯ ಕುಟುಂಬ ಇಟ್ಟಿವಾ ಗ್ರಾಮ ಪಂಚಾಯಿತಿಗೆ ತೆರಳಿದರು. ರಿಜಿಸ್ಟರ್​ ಮದುವೆಗೆ ಎಲ್ಲ ಸಿದ್ಧತೆ ನಡೆದಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಅಖಿಲ್​ ಬರಲೇ ಇಲ್ಲ.

    ಧನ್ಯಾ ಮತ್ತು ಆಕೆಯ ಕುಟುಂಬ ಅಖಿಲ್​ ಫೋನ್​ಗೆ ಎಷ್ಟೇ ಪ್ರಯತ್ನಿಸಿದರೂ ಆತನ ಫೋನ್​ ಸ್ವಿಚ್​ ಆಫ್​ ಅಂತ ಹೇಳುತ್ತಿತ್ತು. ಸಾಕಷ್ಟು ಸಮಯದವರೆಗೂ ಕಾದು, ಅಖಿಲ್​ ಬಗ್ಗೆ ಯಾವುದೇ ಮಾಹಿತಿ ಸಿಗದಿದ್ದಾಗ ಧನ್ಯಾ ಮತ್ತು ಆಕೆಯ ಕುಟುಂಬ ಬಹಳ ಬೇಸರದಿಂದ ಮತ್ತೆ ಮನೆಗೆ ಮರಳಿದರು.

    ಇದನ್ನೂ ಓದಿ: ದೆಹಲಿಯಲ್ಲಿ ನಡೆದ ಕನ್ನಡ ಕಾರ್ಯಕ್ರಮದಲ್ಲಿ ಕಸಾಪ ಅಧ್ಯಕ್ಷರಿಗೇ ಅವಮಾನ: ಬೇಸರಗೊಂಡು ಹೊರ ಬಂದ ಜೋಶಿ

    ಅಖಿಲ್​ ಮಾಡಿದ ವಂಚನೆಯಿಂದ ಮನನೊಂದು ಅದರಿಂದ ಹೊರಬರಲಾಗದೇ ಧನ್ಯಾ ಸಾವಿನ ಹಾದಿ ಹಿಡಿದಿದ್ದಾಳೆ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಈ ಘಟನೆ ಸಂಬಂಧ ಕಡಕ್ಕಲ್​ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ತಲೆಮರೆಸಿಕೊಂಡಿರುವ ಅಖಿಲ್​ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. (ಏಜೆನ್ಸೀಸ್​)

    ನಿಮ್ಮ ಕಣ್ಣಿಗೊಂದು ಸವಾಲು: ಜೀನಿಯಸ್​ ಮಾತ್ರ ಈ ಫೋಟೋದಲ್ಲಿರುವ ಜಿಂಕೆಯನ್ನು ಪತ್ತೆಹಚ್ಚಲು ಸಾಧ್ಯ!

    ಈ​ ಕೆಲಸದ ಸಹವಾಸವೇ ಬೇಡ ಅಂತ ಕಣ್ಮರೆಯಾದ ಪೊಲೀಸ್​ ಅಧಿಕಾರಿ! ಸಹೋದ್ಯೋಗಿಗಳು ಕೊಟ್ಟ ಕಾರಣ ಹೀಗಿದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts