ಶೃಂಗೇರಿ: ಯಡದಳ್ಳಿಯ ನಳಿನಿ ನದಿಯಲ್ಲಿ ಸ್ನಾನಕ್ಕೆ ಇಳಿದ ಯುವಕ ಮುಳುಗಿ ಮೃತಪಟ್ಟಿದ್ದಾನೆ.
ಮರಡಿನಬೈಲು ಗ್ರಾಮದ ನಿತಿನ್ (23) ಮೃತಪಟ್ಟ ದುರ್ದೈವಿ. ಸೋಮವಾರ ನಿತಿನ್ ಸೇರಿದಂತೆ ಆರು ಜನರು ನಳಿನಿ ನದಿಯಲ್ಲಿ ಸ್ನಾನಕ್ಕೆ ಇಳಿದಿದ್ದರು. ಆದರೆ ನಿತಿನ್ ಮುಳುಗಿದ್ದಾನೆ. ಶೃಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.