ಬೆಂಗಳೂರು: ಪ್ರೇಯಸಿಯ ಹುಟ್ಟುಹಬ್ಬ ಆಚರಣೆ ಮಾಡಿದ ಬಳಿಕ ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿ ಹಾಗೂ ಪ್ರಿಯಕರ ಪ್ರಶಾಂತ್ ವಿಚಾರಣೆ ವೇಳೆ ಮತ್ತಷ್ಟು ಭಯಾನಕ ಸಂಗತಿ ಬೆಳಕಿಗೆ ಬಂದಿದೆ
ನವ್ಯ (24) ಕೊಲೆಯಾದ ಯುವತಿ. ಪ್ರಿಯಕರ ಪ್ರಶಾಂತ್ನಿಂದಲೇ ಬರ್ಬರವಾಗಿ ಹತ್ಯೆಯಾಗಿದ್ದಾಳೆ. ಅದ್ಧುರಿಯಾಗಿ ಹುಟ್ಟುಹಬ್ಬ ಆಚರಿಸಿದ ಬೆನ್ನಲ್ಲೇ ನವ್ಯಾಳ ಕೊಲೆಯಾಗಿದೆ.
ಇದನ್ನೂ ಓದಿ: ಇದು ಜಾಬ್ ಟೆರರಿಸಂ! ಗ್ರಾಹಕರು ಸೇವಿಸುವ ಮದ್ಯದಲ್ಲಿ ತನ್ನದೇ ರಕ್ತ ಮಿಶ್ರಣ ಮಾಡಿದ ಪರಿಚಾರಿಕೆ
ಮೊದಲೇ ದೂರು ದಾಖಲಾಗಿತ್ತು
ಈ ಮೊದಲೇ ಇಬ್ಬರ ಪ್ರೇಮ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು ಎಂಬುದು ತಿಳಿದುಬಂದಿದೆ. ಕೋರಮಂಗಲ ಪೊಲೀಸ್ ಠಾಣೆಯಲ್ಲಿ ನವ್ಯ ತಾಯಿಯಿಂದ ಎನ್ಸಿಆರ್ ದಾಖಲಾಗಿತ್ತು. ನವ್ಯಾಗೆ ಪ್ರಶಾಂತ್ ತುಂಬಾ ಕಾಟ ಕೊಡುತ್ತಿದ್ದಾನೆ ಎಂದು ಆರೋಪಿಸಿ ಮೂರು ತಿಂಗಳ ಹಿಂದೆಯೇ ತಾಯಿ ದೂರು ನೀಡಿದ್ದರು.
ಪ್ರೀತಿಯಲ್ಲಿ ಜಗಳ, ವಿರಹ ಮಾಮೂಲಿ
ಇದಾದ ಬಳಿಕ ಪ್ರಶಾಂತ್ನನ್ನು ಕರೆದು ಕೋರಮಂಗಲ ಪೊಲೀಸರು ಬುದ್ಧಿವಾದ ಹೇಳಿದ್ದರು. ಇನ್ನೆಂದು ನವ್ಯಾ ಸಹವಾಸಕ್ಕೆ ಹೋಗುವುದಿಲ್ಲ ಎಂದು ಪ್ರಶಾಂತ್ ಹೇಳಿದ್ದ. ಆದರೆ ಪ್ರೀತಿಯಲ್ಲಿ ಜಗಳ, ವಿರಹ ಎಲ್ಲ ಮಾಮೂಲಿ ಎಂಬುದು ಎಲ್ಲರಿಗು ತಿಳಿದಿರುವ ಸಾಮಾನ್ಯ ಸಂಗತಿ. ನವ್ಯಾ ಮತ್ತು ಪ್ರಶಾಂತ್ ಮತ್ತೆ ಪರಸ್ಪರ ಸಂಪರ್ಕದಲ್ಲಿದ್ದರು.
ಫೋಟೋ ಹಚ್ಚೆ ಹಾಕಿಸಿಕೊಂಡಿದ್ದ
ಹುಟ್ಟುಹಬ್ಬ ಆಚರಿಸಲು ತನ್ನ ರೂಮಿಗೆ ಕರೆದು ಆಕೆಯನ್ನು ಪ್ರಶಾಂತ್ ಹತ್ಯೆ ಮಾಡಿದ್ದಾನೆ. ನವ್ಯಾ ಮೇಲೆ ತನ್ನ ಪ್ರಾಣವನ್ನೇ ಇಟ್ಟುಕೊಂಡಿದ್ದ ಪ್ರಶಾಂತ್, ಕೊನೆಗೆ ಆಕೆಯ ಪ್ರಾಣವನ್ನೇ ತೆಗೆದುಬಿಟ್ಟಿದ್ದಾನೆ. ತನ್ನ ಮೈಮೇಲೆ ನವ್ಯಾಳ ಫೋಟೋವನ್ನು ಹಚ್ಚೆ ಹಾಕಿಸಿಕೊಂಡಿದ್ದ. ಆಕೆಯ ಹೆಸರನ್ನು ದೇಹದ ತುಂಬೆಲ್ಲ ಬರೆಸಿಕೊಂಡಿದ್ದ.
ಇದನ್ನೂ ಓದಿ: ಬಾವಲಿ.. ಹಾವಳಿಯಷ್ಟೇ ಅಲ್ಲ..: ಶಕ್ತಿಶಾಲಿ ಸಸ್ತನಿಗಳ ಕೌತುಕಮಯ ಜೀವನದತ್ತ ಒಂದು ಇಣುಕು ನೋಟ
ಕೊಲೆ ಬಳಿಕ ಪ್ರಶಾಂತ್ ತಲೆಗೆ ಹೊಳೆದಿದ್ದೇನು?
ನವ್ಯಾಳನ್ನು ಕೊಂದ ಬಳಿಕ ಐದು ಗಂಟೆಗಳ ಕಾಲ ಪ್ರಶಾಂತ್ ಮೃತದೇಹದ ಜೊತೆಗಿದ್ದ. ಈ ವೇಳೆ ನವ್ಯಾಳ ಮೃತದೇಹವನ್ನು ತುಂಡು ತುಂಡಾಗಿ ಮಾಡಿ ಎಸೆಯುವ ಪ್ಲಾನ್ ಮಾಡಿಕೊಂಡಿದ್ದ. ಅಷ್ಟೇ ಅಲ್ಲ ತಾನೂ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಯೋಚಿಸಿದ್ದ. ಆದರೆ, ಅದ್ಯಾವುದನ್ನೂ ಮಾಡದೇ ಪೊಲೀಸರ ಮುಂದೆ ಶರಣಾದ.
ಅನುಮಾನ
ನವ್ಯಾ ರೆಸ್ಟ್ ರೂಮ್ಗೆ ಹೋದಾಗಲೇ ಪ್ರಶಾಂತ್ಗೆ ಅನುಮಾನ ಶುರುವಾಗಿತ್ತು. ಏಕೆಂದರೆ, ಮೊಬೈಲ್ ಅನ್ನು ತನ್ನ ಜತೆ ನವ್ಯಾ ತೆಗೆದುಕೊಂಡು ಹೋಗಿದ್ದಳು. ಹೊರ ಬಂದ ಬಳಿಕ ಮೊಬೈಲ್ ಕೊಡುವಂತೆ ಕೇಳಿದ್ದ. ಕೊಡದಿದ್ದಾಗ ತಾನೇ ಚಾಕುವಿನಿಂದ ಚುಚ್ಚಿಕೊಳ್ಳೋದಾಗಿ ಬೆದರಿಸಿದ್ದ. ಕೊನೆಗೆ ನವ್ಯಾಳ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ.
ಸದ್ಯ ಆರೋಪಿ ಪ್ರಶಾಂತ್ನನ್ನು ರಾಜಗೋಪಾಲನಗರ ಠಾಣೆಯೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್)
ನನಗೆ ಪೂರ್ಣಾ ಜೊತೆ ಲವ್ ಅಫೇರ್ ಇದೆ ಆದರೆ… ನಟ, ನಿರ್ದೇಶಕ ರವಿಬಾಬು ಶಾಕಿಂಗ್ ಹೇಳಿಕೆ
ಮದುವೆಗೂ ಮುನ್ನ ನಟನೊಂದಿಗೆ ಸಂಬಂಧ: ಖುಷ್ಬೂ ಬಗ್ಗೆ ಶಾಕಿಂಗ್ ಕಾಮೆಂಟ್ ಮಾಡಿದ ತೆಲುಗು ನಟಿ
ಮಹಿಳೆಯರ ಖಾಸಗಿ ಅಂಗಗಳ ಬಗ್ಗೆ ಮಾತಾಡಿದ್ರೆ ಗುಂಡು ಹಾರಿಸುತ್ತೇನೆಂದ ನಟಿ ರಾಧಿಕಾ ಆಪ್ಟೆ!