ಯಲಬುರ್ಗಾ: ವಿಶ್ವಕರ್ಮರ ವೃತ್ತಿ ಕೌಶಲಕ್ಕೆ ಸಾಟಿ ಇಲ್ಲ. ಪರಂಪರಾಗತವಾಗಿ ಬಂದಿರುವ ಕಲೆಯನ್ನು ಬೆಳೆಸುತ್ತಿರುವ ವಿಶ್ವಕರ್ಮರು ಎಲ್ಲರಿಗೂ ಮಾದರಿ ಎಂದು ತಹಸೀಲ್ದಾರ್ ಶ್ರೀಶೈಲ ತಳವಾರ್ ಹೇಳಿದರು.
ಪಟ್ಟಣದ ದ್ಯಾಮಮ್ಮ ದೇವಸ್ಥಾನ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಪಪಂ ಅಧ್ಯಕ್ಷ ಅಮರೇಶ ಹುಬ್ಬಳ್ಳಿ, ಸಮುದಾಯದ ತಾಲೂಕು ಅಧ್ಯಕ್ಷ ಶ್ರೀಶೈಲಪ್ಪ ಬಡಿಗೇರ್, ಪ್ರಮುಖರಾದ ಮಹಾದೇವಪ್ಪ ಕಮ್ಮಾರ, ಚಂದ್ರಶೇಖರ ಕಮ್ಮಾರ, ಪ್ರಶಾಂತ ಬಡಿಗೇರ, ಚಿದಾನಂದ ಬಡಿಗೇರ, ಉಮೇಶ ಬಡಿಗೇರ, ಸುರೇಶ ಕಮ್ಮಾರ, ಮುಕ್ಕಣ್ಣ ಬಡಿಗೇರ, ಬಸಪ್ಪ ಕಮ್ಮಾರ ಇತರರಿದ್ದರು.