More

    ನೂತನ ಸಂಸತ್ ಭವನದ ಹೊರಗೆ ಪ್ರತಿಭಟನೆಗೆ ಯತ್ನ; ಕುಸ್ತಿಪಟುಗಳು ಪೊಲೀಸ್​ ವಶಕ್ಕೆ

    ನವದೆಹಲಿ: ತಮ್ಮ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯವನ್ನು ಖಂಡಿಸಿ ಕುಸ್ತಿಪಟುಗಳು ಕಳೆದ ಹಲವು ದಿನಗಳಿಂದ ರಾಷ್ಟ್ರ ರಾಜಧಾನಿ ದೆಹಲಿಯ ಜಂತರ್​ ಮಂತರ್​ನಲ್ಲಿ ನಡೆಸುತ್ತಿರುವ ಪ್ರತಿಭಟನೆ ಈಗ ಮತ್ತೊಂದು ಹಂತ ತಲುಪಿದೆ.

    ಇನ್ನು ಪ್ರತಿಭಟನಾ ನಿರತ ಕುಸ್ತಿಪಟುಗಳು ಭಾನುವಾರ(ಮೇ 28)ರಂದು ಉದ್ಘಾಟನೆಗೊಂಡ ನೂತನ ಸಂಸತ್​ ಭವನದ ಎದುರು ಪ್ರತಿಭಟನಾ ನಡೆಸಲು ಮುಂದಾದಾಗ ದೊಡ್ಡ ಹೈ ಡ್ರಾಮಾವೇ ನಡೆದು ಹೋಗಿದೆ.

    ಇದನ್ನೂ ಓದಿ: ದಯವಿಟ್ಟು ನಮ್ಮ ತಾಯಿಯನ್ನು ಉಳಿಸಿ; ತಂದೆಯ ವಿರುದ್ಧ ಠಾಣೆ ಮೆಟ್ಟಿಲೇರಿದ ಪುಟ್ಟ ಬಾಲಕಿಯರು

    ಮಾತಿನ ಚಕಮಕಿ

    ಪ್ರತಿಭಟನಾ ನಿರತ ಕುಸ್ತಿಪಟುಗಳು ನೂತನ ಸಂಸತ್​ ಭವನದ ಎದುರು ಮಹಾಪಂಚಾಯತ್​ ನಡೆಸಿ ತಮ್ಮ ಮೇಲೆ ನಡೆದಿರುವ ದೌರ್ಜನ್ಯಕ್ಕೆ ನ್ಯಾಯ ಕೊಡಿಸುವಂತೆ ಆಗ್ರಹಿಸಲು ಮುಂದಾಗಿದ್ದರು.

    ಈ ವೇಳೆ ಪೊಲೀಸರು ಕುಸ್ತಿಪಟುಗಳು ಸ್ಥಳದೆಲ್ಲೇ ಪ್ರತಿಭಟಿಸುವಂತೆ ಸೂಚಿಸಿದ್ದಾರೆ. ಇದಕ್ಕೊಪ್ಪದ ಪ್ರತಿಭಟನಾನಿರತರು ಹಾಗೂ ಪೊಲೀಸರ ನಡುವೆ ವಾಗ್ವಾದವೇ ನಡೆದು ಹೋಯಿತು. ಬಳಿಕ ಕುಸ್ತಿಪಟುಗಳನ್ನು ವಶಕ್ಕೆ ಪಡೆದು ಬೇರೊಂದು ಸ್ಥಳಕ್ಕೆ ಪೊಲೀಸರು ಕರೆದೊಯ್ದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts