More

    ಆರ್​ಸಿಬಿಗೆ ಸಾನಿಯಾ ಮೆಂಟರ್: ಬೆಂಗಳೂರಿನ ಮಹಿಳಾ ಕ್ರಿಕೆಟ್ ಫ್ರಾಂಚೈಸಿಗೆ ಟೆನಿಸ್ ತಾರೆ ಮಾರ್ಗದರ್ಶನ

    ಬೆಂಗಳೂರು: ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಚೊಚ್ಚಲ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಆಡಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡಕ್ಕೆ ಮೆಂಟರ್ ಆಗಿ ನೇಮಕಗೊಂಡಿದ್ದಾರೆ. ಜತೆಗೆ ಮಹಿಳಾ ತಂಡದ ವಿವಿಧ ತರಬೇತಿ ಸಿಬ್ಬಂದಿಯ ಹೆಸರನ್ನೂ ಆರ್​ಸಿಬಿ ಬುಧವಾರ ಪ್ರಕಟಿಸಿದೆ.

    ವೃತ್ತಿಪರ ಟೆನಿಸ್​ನಿಂದ ಮುಂದಿನ ವಾರ ನಿವೃತ್ತಿ ಹೊಂದುತ್ತಿರುವ 36 ವರ್ಷದ ಸಾನಿಯಾ, 6 ಗ್ರಾಂಡ್ ಸ್ಲಾಂ ಪ್ರಶಸ್ತಿಗಳ ಒಡೆತಿಯಾಗಿದ್ದಾರೆ. ಟೆನಿಸ್ ಆಟಗಾರ್ತಿಯನ್ನು ಕ್ರಿಕೆಟ್ ತಂಡದ ಮಾರ್ಗದರ್ಶನಕ್ಕೆ ನೇಮಿಸಿರುವುದು ಹುಬ್ಬೇರಿಸುವಂಥ ನಡೆಯಾದರೂ, ಆರ್​ಸಿಬಿ ಇದನ್ನು ಸಮರ್ಥಿಸಿಕೊಂಡಿದೆ. ‘ನಮ್ಮ ಪ್ಲೇಬೋಲ್ಡ್ ಸೂತ್ರಕ್ಕೆ ಸಾನಿಯಾ ಸರಿಯಾಗಿ ಹೊಂದುತ್ತಾರೆ. ಕ್ರಿಕೆಟ್ ಅಥವಾ ಟೆನಿಸ್ ಇರಲಿ, ಕ್ರೀಡಾಪಟುಗಳು ಒಂದೇ ರೀತಿಯಾಗಿ ಸಜ್ಜಾಗುತ್ತಾರೆ, ಸ್ಪರ್ಧಾತ್ಮಕತೆ ಎದುರಿಸುತ್ತಾರೆ, ತಮ್ಮ ಕ್ರೀಡೆಯನ್ನು ಪ್ರೀತಿಸುತ್ತಾರೆ ಮತ್ತು ಒತ್ತಡದಲ್ಲಿ ಆಡುತ್ತಾರೆ. ಸಾನಿಯಾ ಕಳೆದ 20 ವರ್ಷಗಳಿಂದ ತಮ್ಮ ವರ್ಣರಂಜಿತ ವೃತ್ತಿಜೀವನದಲ್ಲಿ ಇದನ್ನೇ ಮಾಡಿದ್ದಾರೆ’ ಎಂದು ಆರ್​ಸಿಬಿ ಫ್ರಾಂಚೈಸಿ ತಿಳಿಸಿದೆ.

    ಅರ್ಜುನ, ಖೇಲ್​ರತ್ನ ಮತ್ತು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತೆ ಆಗಿರುವ ಸಾನಿಯಾ, ಆರ್​ಸಿಬಿ ಮಹಿಳಾ ತಂಡವನ್ನು ಮೆಂಟರ್ ಆಗಿ ಕೂಡಿಕೊಳ್ಳುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ‘ಡಬ್ಲ್ಯುಪಿಎಲ್ ಮೂಲಕ ಮಹಿಳಾ ಕ್ರಿಕೆಟ್ ಹೊಸ ಹೆಜ್ಜೆ ಇಡುತ್ತಿದೆ. ಈ ಕ್ರಾಂತಿಕಾರಿ ನಡೆಯ ಭಾಗವಾಗುವುದನ್ನು ಎದುರು ನೋಡುತ್ತಿದ್ದೇನೆ. ಆರ್​ಸಿಬಿ ಮತ್ತು ನಾನು ಒಂದೇ ರೀತಿಯ ಮನೋಭಾವ ಹೊಂದಿದ್ದೇವೆ’ ಎಂದು ಸಾನಿಯಾ ಹೇಳಿದ್ದಾರೆ.

    ತರಬೇತಿ ಸಿಬ್ಬಂದಿ ಬಳಗಕ್ಕೆ ರಾಜ್ಯದ ಮುರಳಿ, ವನಿತಾ
    ಆರ್​ಸಿಬಿ ಮಹಿಳಾ ತಂಡಕ್ಕೆ ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಕೋಚ್ ಆಗಿ ರಾಜ್ಯದ ಆರ್​ಎಕ್ಸ್ ಮುರಳಿ ಮತ್ತು ವಿಆರ್ ವನಿತಾ ಅವರನ್ನು ನೇಮಿಸಲಾಗಿದೆ. ಪ್ರಸಕ್ತ ನ್ಯೂಜಿಲೆಂಡ್ ಮಹಿಳಾ ತಂಡದ ಕೋಚ್ ಆಗಿರುವ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಬೆನ್ ಸಾಯರ್ ಅವರನ್ನು ತಂಡದ ಮುಖ್ಯ ಕೋಚ್ ಆಗಿ ನೇಮಿಸಲಾಗಿದೆ. 45 ವರ್ಷದ ಸಾಯರ್, ದಿ ಹಂಡ್ರೆಡ್ ಮತ್ತು ಮಹಿಳಾ ಬಿಗ್ ಬಾಷ್ ಲೀಗ್​ನಲ್ಲೂ ಕೋಚ್ ಆಗಿದ್ದು, ಆಸೀಸ್ ಮಹಿಳಾ ತಂಡಕ್ಕೂ ಸಹಾಯಕ ಕೋಚ್ ಅಗಿದ್ದರು. ಮಲೊರನ್ ರಂಗರಾಜನ್ ತಂಡದ ಸಹಾಯಕ ಕೋಚ್ ಆಗಿರುತ್ತಾರೆ.

    ಆರ್​ಸಿಬಿ ತರಬೇತಿ ಬಳಗ
    * ಮೆಂಟರ್: ಸಾನಿಯಾ ಮಿರ್ಜಾ
    * ಮುಖ್ಯ ಕೋಚ್: ಬೆನ್ ಸಾಯರ್
    * ಸಹಾಯಕ ಕೋಚ್: ಎಂ. ರಂಗರಾಜನ್
    * ಬ್ಯಾಟಿಂಗ್ ಕೋಚ್: ಆರ್​ಎಕ್ಸ್ ಮುರಳಿ
    * ಫೀಲ್ಡಿಂಗ್ ಕೋಚ್: ವಿಆರ್ ವನಿತಾ
    * ಟೀಮ್ ಮ್ಯಾನೇಜರ್: ಡಾ. ಹರಿಣಿ
    * ಥೆರಪಿಸ್ಟ್: ನವನೀತಾ ಗೌತಮ್

    ಮಾವಿನ ಹಣ್ಣುಗಳನ್ನು ಕದ್ದು ಸಸ್ಪೆಂಡ್​ ಆಗಿರುವ ಪೊಲೀಸ್​ ಅಧಿಕಾರಿಗೆ ಎದುರಾಯ್ತು ಭಾರೀ ಸಂಕಷ್ಟ! 15 ದಿನ ಡೆಡ್​ಲೈನ್​

    ನಾನು ಬಿಜೆಪಿ ಬಿಟ್ಟು ಕಾಂಗ್ರೆಸ್​ಗೆ ಹೋದ್ರೆ ನನ್ನ ತಾಯಿಗೆ ದ್ರೋಹ ಮಾಡಿದಂತೆ! ಸಚಿವ ಆನಂದ್​ ಸಿಂಗ್​ ಹೇಳಿಕೆ

    ಮರದ ದಿಮ್ಮಿಗಳಿಂದ ಯೋಧನ ಮೇಲೆ ಡಿಎಂಕೆ ಕೌನ್ಸಿಲರ್, ಬೆಂಬಲಿಗರಿಂದ​ ದಾಳಿ: ಚಿಕಿತ್ಸೆ ಫಲಿಸದೆ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts