More

    ಚರಂಡಿ ಯಾವಾಗ ಮಾಡಿಸ್ತೀರಾ ಶಾಸಕರೇ? ದಿಗ್ಬಂಧನ ಹಾಕಿ ತರಾಟೆಗೆ ತೆಗೆದುಕೊಂಡ ಮಹಿಳೆಯರು!

    ಗದಗ: ಈ ನಾರಿಮಣಿಯರು, ಶಾಸಕರಿಗೆ ತಕ್ಕ ಪಾಠ ಕಲಿಸಿದ್ದು ಭೂಮಿ ಪೂಜೆಗೆ ಬಂದವರನ್ನು ಸುತ್ತುವರೆದು ತರಾಟೆಗೆ ತೆಗೆದುಕೊಂಡರು. ಈ ಅಪರೂಪದ ಘಟನೆ ನಡೆದದ್ದು ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಹಳ್ಳದ ಕೇರಿ ಮತ್ತು ಕರೆ ಗೋರಿ ಆಶ್ರಯ ಪ್ಲಾಟ್​ನಲ್ಲಿ.

    ಲಕ್ಷ್ಮೇಶ್ವರ ಪಟ್ಟಣದ ಹಳ್ಳದ ಕೇರಿ ಮತ್ತು ಕೆರೆ ಗೋರಿ ಆಶ್ರಯ ಪ್ಲಾಟ್​ನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆ ಮಾಡಲು ಶಾಸಕರಾದ ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿ ಆಗಮಿಸಿದ್ದರು. ಈ ಸಂದರ್ಭ ಸ್ಥಳೀಯ ಮಹಿಳೆಯರು ಜತೆಗೂಡಿದ್ದು ಮೊದಲು ಚರಂಡಿ ಮಾಡುವಂತೆ ಪಟ್ಟು ಹಿಡಿದಿದ್ದಾರೆ.

    ಇದನ್ನೂ ಓದಿ: ಕುಸಿದಿವೆ ಚರಂಡಿ ಮುಚ್ಚಳಗಳು

    ಅಲ್ಲಿಂದ ಕಾಲ್ಕೀಳುವ ಲಕ್ಷಣ ಕಾಣಿಸಿಕೊಂಡಿದ್ದೇ ಶಾಸಕರನ್ನು ಅವರು ಸುತ್ತುವರದು ದಿಗ್ಬಂಧನ ಹಾಕಿ ತರಾಟೆಗೆ ತೆಗೆದುಕೊಂಡಿದ್ದಾರೆ. ಇದರಿಂದಾಗಿ ಶಾಸಕರು ಮಹಿಳೆಯರ ಮಾತಿನಂತೆಯೆ ವರಸೆ ಬದಲಾಯಿಸಿದ್ದು ಮೊದಲಿಗೆ ಚರಂಡಿ ಮಾಡಿ ನಂತರವೇ ರಸ್ತೆ ಮಾಡುವುದಾಗಿ ಹೇಳಿದ್ದಾರೆ.

    ಈ ಸಂದರ್ಭ ಮಹಿಳೆಯರು ಹಾಗೂ ಸ್ಥಳೀಯರ ಮಾತಿಗೆ ಉತ್ತರ ನೀಡದೆ ಶಾಸಕರು ಕಾಲ್ಕಿತ್ತಿದ್ದಾರೆ. ಈ ಹಿಂದೆ ಚರಂಡಿ ಮಾಡುವಂತೆ ಹತ್ತಾರು ಬಾರಿ ಸ್ಥಳೀಯರು ಮನವಿ ಮಾಡಿದ್ದರು. ಆದರೆ ಈ ಬಾರಿ ಸ್ಥಳಕ್ಕೇ ಶಾಸಕರು ಬಂದಿದ್ದು ಈ ವಿಚಾರವಾಗಿ ಬಿಡಬಾರದು ಎಂದುಕೊಂಡ ಸ್ಥಳೀಯರು ಶಾಸಕರಿಗೆ ಚರಂಡಿ ಮಾಡಿಸಲು ಒತ್ತಾಯಿಸಿದ್ದಾರೆ. ಒಟ್ಟಿನಲ್ಲಿ ಚುನಾವಣೆ ಸಮೀಪ ಬರ್ತಾ ಇದ್ದಂತೆ ಭೂಮಿ ಪೂಜೆ ಮಾಡಲು ಬಂದ ಶಾಸಕರಿಗೆ ಸ್ಥಳೀಯರು ಹಾಗೂ ಅಲ್ಲಿನ ಮಹಿಳೆಯರು ಪಾಠ ಕಲಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts