More

    ಶ್ರೀರಂಗಪಟ್ಟಣದ ಲಾಡ್ಜ್​ನಲ್ಲಿ ಮಹಿಳೆ ಕೊಲೆ: ಮೈಮೇಲೆ ಬಟ್ಟೆಯಿಲ್ಲದ ಸ್ಥಿತಿಯಲ್ಲಿ ಮೃತದೇಹ ಪತ್ತೆ

    ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಮಹಿಳೆಯೊಬ್ಬರ ಕತ್ತುಕೊಯ್ದು ಕೊಲೆ ಮಾಡಿರುವ ಭಯಾನಕ ಘಟನೆ ದಂಡುಪಾಳ್ಯ ಗ್ಯಾಂಗ್​ ಮಾದರಿಯ ಕೊಲೆಯನ್ನು ನೆನಪಿಸುವಂತಿದೆ.

    ಶ್ರೀರಂಗಪಟ್ಟಣದ ಲಾಡ್ಜ್ ಒಂದರಲ್ಲಿ ಘಟನೆ ನಡೆದಿದೆ. ನಿನ್ನೆ ಬೆಳಗ್ಗೆ 10 ಗಂಟೆ ಸುಮಾರಿಗೆ ಜೋಡಿಯೊಂದು ಲಾಡ್ಜ್​ಗೆ ಆಗಮಿಸಿತ್ತು. ಜತೆಗಿದ್ದ ಮಹಿಳೆಯನ್ನು ಆಗಂತುಕನೊಬ್ಬ ರಾತ್ರಿಯೇ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಇದನ್ನೂ ಓದಿ: ಒಂದು ಗಂಟೆಗೆ ಒಂದು ಲಕ್ಷ ರೂ. ಕೇಳಿದ ನಟಿ ಶ್ರುತಿ ಹಾಸನ್​…!

    ಜೋಡಿ ಇದ್ದ ರೂಮಿನಿಂದ ರಕ್ತ ಹೊರ ಬರುತ್ತಿದ್ದುದ್ದನ್ನು ಗಮನಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಮಹಿಳೆಯ ಕತ್ತು ಕೂಯ್ದು ಆಗಂತುಕ ಚಾಕುವನ್ನು ಸ್ಥಳದಲ್ಲೇ ಬಿಟ್ಟು ಹೋಗಿದ್ದಾನೆ. ಮಹಿಳೆಯ ಶವ ಬೋರಲಾಗಿ ಮೈಮೇಲೆ ಬಟ್ಟೆಯೇ ಇಲ್ಲದ ಸ್ಥಿತಿಯಲ್ಲಿ ಬಿದ್ದಿರುವಂತೆ ಪತ್ತೆಯಾಗಿದೆ.

    ಈ ಘಟನೆಯಿಂದ ಶ್ರೀರಂಗಪಟ್ಟಣ ಜನತೆ ಬೆಚ್ಚಿಬಿದ್ದಿದೆ. ಮೃತಳ ಬಗ್ಗೆ ಇನ್ನು ಮಾಹಿತಿ ಲಭ್ಯವಾಗಿಲ್ಲ. ಶ್ರೀರಂಗಪಟ್ಟಣ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖಾ ನಂತರವಷ್ಟೇ ಪ್ರಕರಣದ ಅಸಲಿಯತ್ತು ಬಯಲಾಗಲಿದೆ. (ದಿಗ್ವಿಜಯ ನ್ಯೂಸ್​) ಇದನ್ನೂ ಓದಿ: ಮಹಿಳಾ ಅಕೌಂಟ್ಸ್ ಸೂಪರಿಂಡೆಂಟ್ ಕಿರುಕುಳಕ್ಕೆ ಬೇಸತ್ತು ಗುತ್ತಿಗೆದಾರ ಆತ್ಮಹತ್ಯೆಗೆ ಯತ್ನ

    VIDEO| ಕೆಲ ಖದೀಮರಲ್ಲೂ ದೊಡ್ಡ ಮನಸ್ಸಿದೆ ಎಂಬುದಕ್ಕೆ ಈ ವಿಡಿಯೋನೇ ಸಾಕ್ಷಿ: ನೋಡ್ದಿದ್ರೆ ನಿಮಗೇ ನಷ್ಟ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts