ಆಲಪ್ಪುಳ (ಕೇರಳ): ದೇವಸ್ಥಾನಕ್ಕೆಂದು ಮನೆಯಿಂದ ಹೊರಟ ಮಹಿಳೆಯೊಬ್ಬಳು ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಆಲಪ್ಪುಳದ ಥಾಮರಕ್ಕುಳಂ ಬಳಿಯ ಪುತುಚಿರಾದಲ್ಲಿ ನಡೆದಿದೆ.
ವಿಜಯಲಕ್ಷ್ಮೀ (33) ಮೃತ ದುರ್ದೈವಿ. ಥಾರಮಕ್ಕುಳಂ ನಿವಾಸಿ ಪ್ರದೀಪ್ ಎಂಬುವರ ಪತ್ನಿ. ವಿಜಯಲಕ್ಷ್ಮೀ ಗುರುವಾರ ಬೆಳಗ್ಗೆ 5.30ಕ್ಕೆ ಮನೆಯಿಂದ ಹೊರಟಳು. ಹೋಗುವ ಮುನ್ನ ಚಿರಾಕ್ಕಲ್ನಲ್ಲಿರುವ ದೇವಸ್ಥಾನಕ್ಕೆ ತೆರಳುತ್ತಿರುವುದಾಗಿ ತಿಳಿಸಿದಳು. ಆದರೆ, ಯಾವಾಗ ಸರಿಯಾದ ಸಮಯಕ್ಕೆ ಮನೆಗೆ ಮಹಿಳೆ ಹಿಂದಿರುಗಲಿಲ್ಲ ಆಕೆಯ ಕುಟುಂಬ ಹುಡುಕಾಡಲು ಆರಂಭಿಸಿತು.
ದೇವಸ್ಥಾನದ ಮುಂದೆ ಸ್ಕೂಟರ್ ನಿಲ್ಲಿಸಿ, ಕೊಳವೊಂದರ ಬಳಿ ಚಪ್ಪಲಿ ಬಿಟ್ಟಿರುವುದು ಪತ್ತೆಯಾಯಿತು. ಅಲ್ಲದೆ, ಅದೇ ದಿನ 7.30ರ ಸುಮಾರಿಗೆ ವಿಜಯಲಕ್ಷ್ಮೀ ಮೃತದೇಹವು ಸಹ ಕೊಳದಲ್ಲಿ ಪತ್ತೆಯಾಯಿತು.
ವಿಜಯಲಕ್ಷ್ಮೀ ಕಳೆದ 4 ವರ್ಷಗಳಿಂದ ತನ್ನ ಪತಿ ಹಾಗೂ ಮಕ್ಕಳೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದರು. ಅನೇಕ ಸರ ಎಗರಿಸಿದ ಪ್ರಕರಣಗಳಲ್ಲಿ ಪ್ರದೀಪ್ನನ್ನು ಪೊಲೀಸರು ಬಂಧಿಸಿದ ನಂತರ ವಿಜಯಲಕ್ಷ್ಮೀ ತನ್ನ ಮಕ್ಕಳೊಂದಿಗೆ ಬೆಂಗಳೂರಿಗೆ ತೆರಳಿದ್ದಳು. ಪ್ರದೀಪ್ನನ್ನು ಮತ್ತೆ ಪೊಲೀಸರು ಸರಗಳ್ಳತನ ಪ್ರಕರಣದಲ್ಲಿ ಬಂಧಿಸಿದಾಗ ಕಳೆದ ತಿಂಗಳಷ್ಟೇ ತವರಿಗೆ ಮರಳಿದ್ದಳು.
ಆಲಪ್ಪುಳದ ಪವುಂಬಾದಲ್ಲಿರುವ ತನ್ನ ಮನೆಯಲ್ಲಿ ವಿಜಯಲಕ್ಷ್ಮೀ ಉಳಿದುಕೊಂಡಿದ್ದಳು. ವಿಜಯಲಕ್ಷ್ಮೀ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. (ಏಜೆನ್ಸೀಸ್)
ಬಾಗಲಕೋಟೆ: ಎಸಿಬಿ ದಾಳಿಯಿಂದ ಕಳಚಿಬಿತ್ತು ಎಫ್ಡಿಎ ಸಿಬ್ಬಂದಿ, ಅಧಿಕಾರಿಗಳ ಮುಖವಾಡ!
VIDEO| ಇಂಥಾ ಅಂಪೈರ್ ನೀವು ಎಲ್ಲೂ ನೋಡಿರಲ್ಲ: ವಾವ್ ಎನಿಸುವ ವಿಡಿಯೋ ಇದು!
ಗಿನ್ನೆಸ್ ದಾಖಲೆಯ ಹಾದಿಯಲ್ಲಿ ಹುಬ್ಬಳ್ಳಿಯ ಬ್ಯೂಟಿಷಿಯನ್ ಶೈಲಜಾ ಬಗಾಡೆ