ಬೆಂಗಳೂರು: ಸಿಎಂ ಆಯ್ಕೆ ಕಸರತ್ತು ಇನ್ನೂ ಜಾರಿಯಲ್ಲಿದ್ದು ಇಂದು ಕರ್ನಾಟಕದ ಸಿಎಂ ಗಾದಿ ಏರುವವರು ಯಾರು ಎನ್ನುವ ವಿಚಾರ ಫೈನಲ್ ಆಗುತ್ತಾ ಎನ್ನುವ ಪ್ರಶ್ನೆ ಎದ್ದಿದೆ?
ಮುಂದಿನ ಸಿಎಂ ಆಯ್ಕೆಗಾಗಿ ಖರ್ಗೆ ಮನೆಯಲ್ಲಿ ಇಂದು ಮತ್ತೆ ಸಭೆ ನಡೆಯಲಿದ್ದು ಇಬ್ಬರು ನಾಯಕರ ಜತೆ ವರಿಷ್ಠರು ಚರ್ಚೆ ನಡೆಸಲಿದ್ದಾರೆ. ಇಂದೇ ಫೈನಲ್ ಮೀಟಿಂಗ್ ಆಗುವುದು ಎನ್ನಲಾಗುತ್ತಿದ್ದು ಬೆಳಗ್ಗೆ 11 ಗಂಟೆಗೆ ನಡೆಯಲಿದೆ.
ಮಲ್ಲಿಕಾರ್ಜುನ ಖರ್ಗೆ, ಸಿದ್ದು ಹಾಗೂ ಡಿಕೆಶಿ ಜತೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಿದ ಬಳಿಕವೇ ರಾಹುಲ್ ಗಾಂಧಿ ಜೊತೆ ಚರ್ಚೆ ನಡೆಸಲಿದ್ದಾರೆ. ಇದಕ್ಕಾಗಿ ನಿನ್ನೆ ಖರ್ಗೆ ಇಬ್ಬರ ಅಭಿಪ್ರಾಯ ಆಲಿಸಿದ್ದರು.
ಸದ್ಯಕ್ಕಂತೂ ಸಿಎಂ ಹುದ್ದೆ ನನಗೇ ಬೇಕು ಎಂದು ಸಿದ್ದರಾಮಯ್ಯ ಮತ್ತು ಡಿಕೆಶಿ ಪಟ್ಟು ಹಿಡಿದು ಕುಳಿತಿದ್ದಾರೆ.