ನವದೆಹಲಿ: ಐಪಿಎಲ್ 2020 ಸರಣಿಯಲ್ಲಿ ಗೆದ್ದಿರುವ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾರನ್ನು ಭಾರತದ ಕ್ಯಾಫ್ಟನ್ ಮಾಡಬೇಕು ಎನ್ನುವ ಕೂಗು ಕೇಳಿಬರುತ್ತಿದೆ. ಟಿ20 ಆಟಗಳಿಗಾದರೂ ಅವರನ್ನು ನಾಯಕನನ್ನಾಗಿಸಿ ಎಂದು ಅನೇಕರು ಕೇಳುತ್ತಿರುವ ಬೆನ್ನಲ್ಲೇ ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಛೋಪ್ರಾ ವಿಶ್ಲೇಷಣೆ ನೀಡಿದ್ದಾರೆ.
ಇದನ್ನೂ ಓದಿ: ಒಬ್ಬ ಮಗನ ವಿರುದ್ಧ ಡ್ರಗ್ಸ್ ಕೇಸ್, ಇನ್ನೊಬ್ಬನದ್ದು ರೇಪ್ ಕೇಸ್: ಅಂತೂ ರಾಜೀನಾಮೆ ನೀಡಿದ ಕೋಡಿಯೇರಿ
ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾರನ್ನು ಟಿ20 ನಾಯಕನನ್ನಾಗಿ ಮಾಡದಿದ್ದರೆ ಭಾರತ ತಪ್ಪು ಮಾಡಿದಂತಾಗುತ್ತದೆ ಎಂದು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಹೇಳಿದ್ದರು. ಅವರ ಈ ಹೇಳಿಕೆಗೆ ಆಕಾಶ್ ಉತ್ತರ ನೀಡಿದ್ದಾರೆ. ‘ರೋಹಿತ್ ಶರ್ಮಾ ಅವರಿಗೆ ಮುಂಬೈ ಇಂಡಿಯನ್ಸ್ ಬದಲಾಗಿ ಆರ್ಸಿಬಿಯನ್ನು ಕೊಟ್ಟಿದ್ದರೆ, ಅವರಿಗೆ ಈ ರೀತಿಯ ಸಕ್ಸಸ್ ಕಾಣಲು ಸಾಧ್ಯವಾಗುತ್ತಿತ್ತೇ? ಅವರು ಈಗ ಗೆದ್ದಿರುವ ಐದು ಕಪ್ಗಳಲ್ಲಿ ಇಲ್ಲಿ ಎಷ್ಟನ್ನು ಗೆಲ್ಲುತ್ತಿದ್ದರು?’ ಎಂದು ಅವರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ರೈಲು ಹಳಿಯ ಮೇಲೆ ಪತ್ರಕರ್ತನ ಶವ- ಲೇಡಿ ಇನ್ಸ್ಪೆಕ್ಟರ್ ವಿರುದ್ಧ ಎಫ್ಐಆರ್
ರೋಹಿತ್ ಶರ್ಮಾ ಅದ್ಭುತ ನಾಯಕ ಎನ್ನುವುದನ್ನು ನಾನೂ ಒಪ್ಪುತ್ತೇನೆ. ಆದರೆ ಅದು ಮುಂಬೈ ಇಂಡಿಯನ್ಸ್ ತಂಡಕ್ಕೆ ಮಾತ್ರ. ಆರ್ಸಿಬಿ ಸೋಲಿಗೆ ನಾವು ನಾಯಕ ಕೊಹ್ಲಿಯನ್ನು ದೂರಲಾಗುವುದಿಲ್ಲ. ಯಾವುದೇ ಗೆಲುವು ಅಥವಾ ಸೋಲು ಕೇವಲ ನಾಯಕನಿಂದ ನಿರ್ಧಾರವಾಗುವುದಿಲ್ಲ ಎಂದು ಅವರು ಹೇಳಿದ್ದಾರೆ. (ಏಜೆನ್ಸೀಸ್)
ಯೋಧರೊಂದಿಗೆ ಮೋದಿಜೀ ದೀಪಾವಳಿ; ಗುಜರಾತ್ ಸೈನಿಕರಿಗೆ ಸಿಹಿ ತಿನ್ನಿಸಲಿದ್ದಾರೆ ಪ್ರಧಾನಿ