More

    ದನದ ಹಿಂಡು ತಪ್ಪಿಸಲು ಚಾಲಕ ಪ್ರಯತ್ನಿಸಿದಾಗ ವಾಹನ ಪಲ್ಟಿ!

    ನವದೆಹಲಿ: ಕುಖ್ಯಾತ ಪಾತಕಿ ವಿಕಾಸ್​ ದುಬೆಯನ್ನು ಕಾನ್ಪುರಕ್ಕೆ ಕರೆತರುವಾಗ ಎದುರಿಗೆ ದನದ ಹಿಂಡು ಬಂದಿತು. ಅದನ್ನು ತಪ್ಪಿಸಲು ಚಾಲಕ ಯತ್ನಿಸಿದಾಗ ವಾಹನ ಪಲ್ಟಿಯಾಯಿತು ಎಂದು ದುಬೆ ಬಂಧನಕ್ಕೆ ಉತ್ತರ ಪ್ರದೇಶ ಸರ್ಕಾರ ರಚಿಸಿದ್ದ ವಿಶೇಷ ಕಾರ್ಯಪಡೆ ಹೇಳಿದೆ.

    ಈ ಬಗ್ಗೆ ಶುಕ್ರವಾರ ಸಂಜೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಕಾರ್ಯಪಡೆ, ವಾಹನ ಪಲ್ಟಿ ಹೊಡೆಯುತ್ತಲೇ ಅದರಿಂದ ಜಿಗಿದ ವಿಕಾಸ್​ ದುಬೆ ತಪ್ಪಿಸಿಕೊಂಡು ಹೋಗಲು ಯತ್ನಿಸಿದ. ನಾವು ಆತನನ್ನು ಬೆನ್ನಟ್ಟಿದೆವು. ಜೀವಂತವಾಗಿ ಆತನನ್ನು ಸೆರೆಹಿಡಿಯಬೇಕು ಎನ್ನುವುದು ನಮ್ಮ ಪ್ರಯತ್ನವಾಗಿತ್ತು ಎಂದು ತಿಳಿಸಿದೆ.

    ಇದನ್ನೂ ಓದಿ: ಸಹೋದರಿಯಂತೆ ವಿಕಾಸ್​ ದುಬೆಗೆ ತಪ್ಪದೆ ರಾಖಿ ಕಟ್ಟುತ್ತಿದ್ದ ಮಾಜಿ ಶಾಸಕ

    ಆದರೆ, ಅತ ನಮ್ಮ ಸಿಬ್ಬಂದಿಯಿಂದ ಅಪಹರಿಸಿದ್ದ ಪಿಸ್ತೂಲ್​ನಿಂದ ನಿರಂತರವಾಗಿ ಗುಂಡು ಹಾರಿಸಲಾರಂಭಿಸಿದ. ಆಗ ನಮ್ಮ ಸಿಬ್ಬಂದಿ ಅನಿವಾರ್ಯವಾಗಿ ಆತನತ್ತ ಗುಂಡು ಹಾರಿಸಬೇಕಾಯಿತು. ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ತಕ್ಷಣವೇ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು ಎಂದು ಹೇಳಿದೆ.

    ಎದೆ, ಕೈಗೆ ಗುಂಡು: ವಿಕಾಸ್​ ದುಬೆಯನ್ನು ಆಸ್ಪತ್ರೆಗೆ ಕರೆತಂದಾಗ ಆತನಿಗೆ ನಾಲ್ಕು ಗುಂಡುಗಳು ತಗುಲಿದ್ದವು ಎಂದು ಕಾನ್ಪುರದ ಎಲ್​ಎಲ್​ಆರ್​ ಆಸ್ಪತ್ರೆಯ ಪ್ರಿನ್ಸಿಪಾಲ್​ ಡಾ. ಆರ್​.ಬಿ. ಕಮಲ್​ ಹೇಳಿದ್ದಾರೆ. ಮೂರು ಗುಂಡುಗಳು ಆತನ ಎದೆಭಾಗದಲ್ಲಿದ್ದರೆ, ಒಂದು ಗುಂಡು ಆತನ ಕೈಗೆ ತಗುಲಿತ್ತು ಎಂದು ವಿವರಿಸಿದ್ದಾರೆ.

    ವಿಕಾಸ್​ ದುಬೆ ಸಿಡಿಸಿದ ಗುಂಡುಗಳು ತಗುಲಿ ಪೊಲೀಸ್​ ಸಿಬ್ಬಂದಿಗೂ ಗಾಯಗಳಾಗಿವೆ. ಆದರೆ, ಗುಂಡುಗಳು ಅವರನ್ನು ಸವರಿಕೊಂಡು ಹೋಗಿವೆ ಎಂದು ಹೇಳಿದ್ದಾರೆ.

    ನಟೋರಿಯಸ್‌ ರೌಡಿ ದುಬೆ ಸಾವಿನ ಕುರಿತು ವೈದ್ಯರು ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts