|ಹರ್ಷವರ್ಧನ್ ಬ್ಯಾಡನೂರು
ಚಿತ್ರ : ವ್ಹೀಲ್ಚೇರ್ ರೋಮಿಯೋ
ನಿರ್ದೇಶನ : ಜಿ. ನಟರಾಜ್
ನಿರ್ಮಾಣ : ಟಿ. ವೆಂಕಟಾಚಲಯ್ಯ
ತಾರಾಗಣ : ರಾಮ್ ಚೇತನ್, ಮಯೂರಿ ಕ್ಯಾಟರಿ, ರಂಗಾಯಣ ರು, ಸುಚೇಂದ್ರ ಪ್ರಸಾದ್, ಗಿರೀಶ್ ಶಿವಣ್ಣ, ತಬಲಾ ನಾಣಿ ಮತ್ತು ಮುಂತಾದವರು
ಸ್ಟಾರ್: 3.5
ಆತ ಉಲ್ಲಾಸ್ (ರಾಮ್ ಚೇತನ್). ಒಂದು ವಿಚಿತ್ರ ಮತ್ತು ಅಪರೂಪದ ಖಾಯಿಲೆಯಿಂದ ಬಳಲುತ್ತಿರುತ್ತಾನೆ. ಬಾಯಿ, ನಾಲಗೆ, ಕಣ್ಣು ಬಿಟ್ಟರೆ ಅವನ ದೇಹದ ಇನ್ಯಾವ ಅಂಗವೂ ಕೆಲಸ ಮಾಡುವುದಿಲ್ಲ. ಅವನಿಗೆ ಅಮ್ಮ ಇಲ್ಲ. ಅಪ್ಪನೇ (ಸುಚೇಂದ್ರ ಪ್ರಸಾದ್) ಎಲ್ಲ. ಮಗನಿಗೂ ಅಪ್ಪನೇ ಪ್ರಪಂಚ. ಅಪ್ಪ&ಮಗನ ಬಂಧ ಎಷ್ಟರ ಮಟ್ಟಿಗೆ ಅಂದರೆ ಮಗನಿಗೆ ಕೆಟ್ಟ ಕುತೂಹಲ ತಣಿಸಲು ವೇಶ್ಯೆ ಸಂಗ ಮಾಡಲು ತಾನೇ ಮಾಂಸದ ಅಡ್ಡೆಗೆ ಕರೆದುಕೊಂಡು ಹೋಗುತ್ತಾನೆ. ಜಾಕ್ ಮಾಮ (ರಂಗಾಯಣ ರು) ಮೂಲಕ ವೇಶ್ಯೆ ಡಿಂಪಲ್ (ಮಯೂರಿ) ಪರಿಚಯವಾಗುತ್ತದೆ. ಪರಿಚಯ ಪ್ರೇಮಕ್ಕೆ ತಿರುಗುತ್ತದೆ. ಅಲ್ಲಿ ಡಿಂಪಲ್ ಕರಾಳ ಇತಿಹಾಸವೂ ತೆರೆದುಕೊಳ್ಳುತ್ತದೆ. ಉಲ್ಲಾಸ್ ಪ್ರೀತಿಯನ್ನು ಡಿಂಪಲ್ ಒಪು$್ಪತ್ತಾಳಾ? ಒಪ್ಪಿದರೂ ಪ್ರಸಾದ್ ಇಬ್ಬರನ್ನೂ ಅಪು$್ಪತ್ತಾರಾ? ಅವರಿಬ್ಬರೂ ಒಂದಾಗುತ್ತಾರಾ? ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕೆಂದರೆ ಸಿನಿಮಾ ನೋಡಿ…
ಸಿನಿಮಾ ತೆರೆದುಕೊಳ್ಳುವ ಮೊದಲ ಸೀನ್ನಿಂದಲೇ ಅದ್ಭುತ ಸಂಭಾಷಣೆಯ ಮೂಲಕ ಪ್ರೇಕ್ಷಕರನ್ನು ಹಿಡಿದಿಡುವ ಪ್ರಯತ್ನ ಮಾಡಿದೆ “ವ್ಹೀಲ್ಚೇರ್ ರೋಮಿಯೋ’ ಚಿತ್ರತಂಡ. ಈ ಚಿತ್ರದ ಪಂಚಿಂಗ್ ಸಂಭಾಷಣೆಗಳನ್ನು ಹರಿದು ಹಂಚಿದರೆ ಕಡಿಮೆ ಎಂದರೂ ಇನ್ನೂ 10 ಸಿನಿಮಾಗಳಿಗೆ ಬಳಸಬಹುದಿತ್ತೇನೋ? ಸಂಭಾಷಣೆಗಳು ಒಂದು ಕಡೆ ಖುಷಿಕೊಡುವುದರ ಜತೆಗೆ, ಇದು ರಾಧಾಕೃಷ್ಣ ಕಶ್ಯಪ್ ಅವರ ಸಂಭಾಷಣೆಯ ಕೊನೆಯ ಸಿನಿಮಾ ಎಂಬ ವಿಷಯ ಬೇಸರ ತರಿಸುತ್ತದೆ.
ಮೊದರ್ಲಧದವರೆಗೂ ಅದೇ ವೇಗ, ನಗು, ಒನ್ಲೈನರ್ಗಳ ಕಚಗುಳಿ ಪ್ರೇಕ್ಷಕರೊಂದಿಗೆ ಹಿಡಿದಿಡುತ್ತದೆ. ದ್ವೀತಿಯಾರ್ಧ ನಿಧಾನ ಎಂದನಿಸಿದರೂ ನೋಡಿಸಿಕೊಂಡು ಹೋಗುತ್ತದೆ. ಸಾಮಾನ್ಯವಾಗಿ ಹೀರೋಗಳು ಸಿನಿಮಾವನ್ನು ತಮ್ಮ ಹೆಗಲ ಮೇಲೆ ಹೊತ್ತು ಸಾಗುತ್ತಾರೆ. ಆದರೆ,ಈ ವ್ಹೀಲ್ಚೇರ್ಗೆ ನಾಲ್ಕು ಚಕ್ರಗಳು, ಅಲ್ಲಲ್ಲ ಹೀರೋಗಳು. ದಿ. ರಾಧಾಕೃಷ್ಣ ಕಶ್ಯಪ್ ಅವರ ಸಂಭಾಷಣೆ ಒಂದು ಚಕ್ರವಾದರೆ, ಸುಚೇಂದ್ರ ಪ್ರಸಾದ್ ಮತ್ತು ರಂಗಾಯಣ ರು ಜುಗಲ್ಬಂದಿ ಅಭಿನಯ ಇನ್ನೊಂದು ಚಕ್ರ. ನಿರ್ದೇಶಕ ನಟರಾಜ್ ಚಾಕಚಕ್ಯತೆ ಮತ್ತು ನಾಯಕ&ನಾಯಕಿಯ ವಿಭಿನ್ನ ಪಾತ್ರಗಳು ಇನ್ನೆರಡು ಚಕ್ರಗಳಾಗಿವೆ. ಈ ನಾಲ್ಕು ಚಕ್ರಗಳಿಂದ ಚಿತ್ರ ವಿಭಿನ್ನವಾಗಿ ಎದ್ದು ನಿಲ್ಲುತ್ತದೆ.
ಹೀರೋಯಿಸಂ, ಬಿಲ್ಡಪ್ಗಳ ಮಧ್ಯೆ ಕಥೆ ಕೇಂದ್ರಿತ ಸಿನಿಮಾಗಳೂ ಬರುತ್ತಿರುತ್ತವೆ ಎಂಬುದಕ್ಕೆ ಒಳ್ಳೆಯ ಉದಾಹರಣೆ “ವ್ಹೀಲ್ಚೇರ್ ರೋಮಿಯೊ’.