ನವದೆಹಲಿ: ಕರೊನಾ ಮಹಾಮಾರಿ, ನಿರುದ್ಯೋಗ ಹಾಗೂ ಆರ್ಥಿಕ ಬಿಕ್ಕಟ್ಟುಗಳ ಮಧ್ಯೆಯೂ ಸದ್ಯ ಲೋಕಸಭೆ ಚುನಾವಣೆ ನಡೆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಮೈತ್ರಿಕೂಟ 286 ಸೀಟುಗಳನ್ನು ಗೆದ್ದು ಅಧಿಕಾರಕ್ಕೇರಲಿದೆ ಎಂದು ಸಿ&ವೋಟರ್ ಸಮೀೆ ಹೇಳಿದೆ. ಬಿಹಾರದ ಜೆಡಿಯು ಪ ಎನ್ಡಿಎ ಮೈತ್ರಿಕೂಟದಿಂದ ನಿರ್ಗಮಿಸಿದ ಪರಿಣಾಮ ಈಗಿರುವ 307 ಲೋಕಸಭೆ ಸೀಟುಗಳಲ್ಲಿ 21ರಷ್ಟು ಸೀಟುಗಳು ಕಡಿಮೆಯಾಗಲಿವೆ ಎಂದು ಸಮೀಕ್ಷೆ ತಿಳಿಸಿದೆ.
ಫೆಬ್ರವರಿ ಮತ್ತು ಆಗಸ್ಟ್ ತಿಂಗಳ ಮಧ್ಯೆ ನಡೆಸಲಾದ ಈ ಸಮೀೆಯಲ್ಲಿ ಮತ್ತೆ ನರೇಂದ್ರ ಮೋದಿ ನಾಯಕತ್ವವನ್ನೇ ಜನರು ನೆಚ್ಚಿಕೊಂಡಿದ್ದಾರೆ ಎಂದು ತಿಳಿಸಲಾಗಿದ್ದು, ಸಮೀೆಯಲ್ಲಿ ಪಾಲ್ಗೊಂಡ 122016 ಮಂದಿಯಲ್ಲಿ ಶೇ.53ರಷ್ಟು ಜನರು ಈಗಲೂ ಪ್ರಧಾನಿ ಹುದ್ದೆಗೆ ಮೋದಿಯೇ ಸೂಕ್ತ ಎಂದಿದ್ದಾರೆ. ಶೇ.9ರಷ್ಟು ಮಂದಿ ರಾಹುಲ್ ಗಾಂಧಿ ಪರ ಒಲವು ವ್ಯಕ್ತಪಡಿಸಿದ್ದರೆ, ಶೇ.7ರಷ್ಟು ಮಂದಿ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಪ್ರಧಾನಿಯಾಗಬೇಕು ಎಂದ ಅನಿಸಿಕೆ ವ್ಯಕ್ತಪಡಿಸಿದ್ದಾರೆ.
ನಿತೀಶ್ ಪ್ರಧಾನಿ, ನಿಲ್ಲದ ಚರ್ಚೆ
ನಾನು ಪ್ರಧಾನಿ ಹುದ್ದೆಗೆ ಆಕಾಂಯಲ್ಲ ಎಂದು 2 ದಿನಗಳ ಹಿಂದೆ ಬಿಹಾರ ಸಿಎಂ ನಿತೀಶ್ ಕುಮಾರ್ ಹೇಳಿದ್ದರೂ, ಪ್ರಧಾನಿಯಾಗುವ ಎಲ್ಲಾ ಗುಣಗಳು ನಿತೀಶ್ರಲ್ಲಿದೆ ಎಂದು ಜೆಡಿಯು ಅಧ್ಯ ರಾಜೀವ್ ರಂಜನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. ಈ ಮೂಲಕ ನಿತೀಶ್ ಪ್ರಧಾನಿ ಅಭ್ಯರ್ಥಿಯಾಗುತ್ತಾರಾ ಎಂಬ ಚರ್ಚೆಗೆ ಜೆಡಿಯು ದನಿಗೂಡಿಸಿದೆ. ರಾಜ್ಯದಲ್ಲಿ ಹೊಸ ಸರ್ಕಾರ ಕಾರ್ಯಾರಂಭ ಮಾಡಿದ ತಣ ನಾವು ದೆಹಲಿಗೆ ಹೋಗಿ ಎಲ್ಲಾ ವಿಪಗಳೊಂದಿಗೆ ಸಭೆ ನಡೆಸಲಿದ್ದೇವೆ. ಈ ಮೂಲಕ ಬಿಜೆಪಿ ವಿರುದ್ಧ ದೇಶಾದ್ಯಂತ ಹೋರಾಟ ನಡೆಸಲು ತಯಾರಿ ನಡೆಸಲಿದ್ದೇವೆ ಎಂದು ರಾಜೀವ್ ರಂಜನ್ ಮಾಹಿತಿ ನೀಡಿದ್ದಾರೆ.