More

    ಸಿದ್ದರಾಮಯ್ಯ ಅವರನ್ನು ರಹಸ್ಯವಾಗಿ ಭೇಟಿ ಆಗಿದ್ರಾ? ಯಡಿಯೂರಪ್ಪ ಹೇಳಿದ್ದೇನು?

    ಬೆಂಗಳೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು 2020ರ ಫೆ.27ರಂದು ನನ್ನ ಜನ್ಮ ದಿನದ ಕಾರ್ಯಕ್ರಮ ಹೊರತುಪಡಿಸಿ ವೈಯಕ್ತಿಕವಾಗಿ ಭೇಟಿಯಾಗಿಲ್ಲ. ಅದರ ಅಗತ್ಯವೂ ಇಲ್ಲವೆಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

    ರಾಜ್ಯದಲ್ಲಿ ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಪಕ್ಷದಲ್ಲಿ ನಾವು ಕಾರ್ಯನಿರ್ವಹಿಸುತ್ತಿದ್ದೇವೆ.‌ ಈ ಗುರಿ ಮುಟ್ಟುವ ತನಕ ವಿರಮಿಸುವುದಿಲ್ಲ. ನಂಬಿದ ಸಿದ್ಧಾಂತದೊಂದಿಗೆ ನಾನೆಂದಿಗೂ ರಾಜಿಯಾಗಿಲ್ಲ. ಆಗುವುದೂ ಇಲ್ಲ. ವಿರೋಧ ಪಕ್ಷದ ಸಿದ್ದರಾಮಯ್ಯ ಕೂಡ ನನ್ನನ್ನು ಭೇಟಿಯಾಗಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಮಾಧ್ಯಮಗಳಲ್ಲಿ ಈ ಕುರಿತು ಬರುತ್ತಿರುವ ವರದಿ ಸತ್ಯಕ್ಕೆ ದೂರ, ಅರ್ಥರಹಿತವಾಗಿದೆ ಎಂದು ಟ್ವೀಟ್ ಮೂಲಕ ಬಿಎಸ್​​ವೈ ಸ್ಪಷ್ಟಪಡಿಸಿದ್ದಾರೆ.

    ಬಿಎಸ್​​ವೈ ಹಾಗೂ ಸಿದ್ದರಾಮಯ್ಯ ರಹಸ್ಯ ಭೇಟಿಯಿಂದಾಗಿ‌ ಬಿಎಸ್​​ವೈ‌ ಹಾಗೂ ಅವರ ಪುತ್ರನ ಆಪ್ತರ‌ ಕಚೇರಿ, ಮನೆ ಮೇಲೆ ಐಟಿ ದಾಳಿ ನಡೆದಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದರು. ಈ ಭೇಟಿಯನ್ನು ಸಿದ್ದರಾಮಯ್ಯ ಸಾರಾಸಗಟು ಅಲ್ಲಗಳೆದು, ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ಪಡೆಯುವೆ ಎಂದು ಸವಾಲೆಸೆದಿದ್ದರು. ಇದೀಗ ಬಿಎಸ್​​ವೈ ಕೂಡ ಸ್ಪಷ್ಟನೆ ನೀಡುವ ಮೂಲಕ ಎಚ್​​ಡಿಕೆಗೆ ಪರೋಕ್ಷವಾಗಿ ಉತ್ತರಿಸಿದ್ದಾರೆ.

    ಸಿದ್ದರಾಮಯ್ಯಂಗೆ ಪಾಠ ಕಲಿಸೋದೇ ನನ್ನ ಉದ್ದೇಶ ಎಂದ ಎಚ್​ಡಿಕೆ

    ಚಿಕ್ಕ ವಯಸ್ಸಲ್ಲಿ ರೈತನ ವೇಷ ಧರಿಸಿದ್ದ ಈ ಹುಡುಗ ಯಾರು, ಹೇಳಬಲ್ಲಿರಾ?

    ಜಮ್ಮು, ದೆಹಲಿ ಬಾಂಬ್​ ಸ್ಫೋಟ, ಸೈನಿಕರ ಹತ್ಯೆ – ಬಂಧಿತ ಪಾಕ್​ ಉಗ್ರ ಅಸ್ರಫ್​ ಕೈಗೊಂಡ ಕೃತ್ಯಗಳಿವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts